Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
Advertisement

ತಲೆನೋವು ಬಂದಾಗ ಹೀಗೆ ಮಾಡಿ: ಅಜೀರ್ಣ–ಉಷ್ಣದಿಂದಲೂ ತಲೆನೋವು ಬರಬಹುದು

ತಲೆನೋವು ಬಂದಾಗ ಹೀಗೆ ಮಾಡಿ: ಅಜೀರ್ಣ–ಉಷ್ಣದಿಂದಲೂ ತಲೆನೋವು ಬರಬಹುದು

ತಲೆನೋವು ಇಂದಿನ ವೇಗದ ಜೀವನದಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದರೂ, ಇದರ ಹಿಂದೆ ಹಲವು ಕಾರಣಗಳು ಅಡಗಿವೆ. ಒತ್ತಡ, ನಿದ್ರೆ ಕೊರತೆ, ಸ್ಕ್ರೀನ್‌ ಸಮಯದ ಹೆಚ್ಚಳ, ದೇಹದ ನೀರಿನ ಕೊರತೆ ಮಾತ್ರವಲ್ಲ — ಅಜೀರ್ಣ ಅಥವಾ ದೇಹದ ಉಷ್ಣ ಹೆಚ್ಚಾದರೂ ತಲೆನೋವು ಉಂಟಾಗಬಹುದು. ತಜ್ಞರ ಪ್ರಕಾರ, ತಪ್ಪು ಆಹಾರ ಪದ್ಧತಿ, ಖಾರ–ಎಣ್ಣೆ ಹೆಚ್ಚು ಸೇವನೆ, ಹೊಟ್ಟೆ ಉರಿಯೂತ ಇವುಗಳು ದೇಹದ ಒಳಗಿನ ತಾಪಮಾನವನ್ನು ಹೆಚ್ಚಿಸಿ ತಲೆನೋವಿಗೆ ಕಾರಣವಾಗುತ್ತವೆ.

ಅಜೀರ್ಣ ಅಥವಾ ದೇಹದ ಉಷ್ಣ ಹೆಚ್ಚಾದಾಗ ತಲೆನೋವು ಬರುತ್ತದೆ

ಅಜೀರ್ಣದಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಿ ತಲೆ ಭಾಗಕ್ಕೆ ಒತ್ತಡ ಏರಬಹುದು. ಇದೇ ರೀತಿ, ದೇಹದ ಉಷ್ಣ ಏರಿದಾಗ ದೇಹ ನೀರನ್ನು ವೇಗವಾಗಿ ಕಳೆದುಕೊಳ್ಳುತ್ತಿದ್ದು, ಇದರಿಂದ ತಲೆನೋವು ತೀವ್ರವಾಗುತ್ತದೆ. ತಲೆನೋವು ಬಂದ ತಕ್ಷಣ ಹಲವರು ಮಾತ್ರೆ ಸೇವಿಸುತ್ತಾರೆ. ಆದರೆ ಅಜೀರ್ಣ ಅಥವಾ ಉಷ್ಣವೇ ಕಾರಣವಾಗಿದ್ದರೆ, ಮಾತ್ರೆ ತೆಗೆದುಕೊಂಡರೂ ದೇಹದ ಉಷ್ಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸುತ್ತಾರೆ. ಇದರಿಂದ ನೋವು ಕ್ಷಣ ಮಾತ್ರ ಕಡಿಮೆಯಾಗಬಹುದು, ಆದರೆ ಮೂಲ ಸಮಸ್ಯೆ ಉಳಿಯುತ್ತದೆ.

ಇದನ್ನೂ ಓದಿ: ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ

ನೀರು ಕುಡಿಯುವುದು ಅತ್ಯಂತ ಮುಖ್ಯ

ದೇಹದ ಉಷ್ಣವನ್ನು ಸಮತೋಲನಗೊಳಿಸಲು ಮತ್ತು ಡಿಹೈಡ್ರೇಷನ್ ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು.
ಒಂದು–ಎರಡು ಗ್ಲಾಸ್ ನೀರು ತಕ್ಷಣದ ರಿಲೀಫ್ ಕೊಡಬಹುದು. ಮೊಬೈಲ್, ಲ್ಯಾಪ್‌ಟಾಪ್‌ ಬಳಕೆ ಜಾಸ್ತಿಯಾದರೆ ಕಣ್ಣುಗಳಿಗೆ ಒತ್ತಡ ಹೆಚ್ಚಾಗಿ ತಲೆನೋವು ತೀವ್ರವಾಗುತ್ತದೆ.
10–15 ನಿಮಿಷ ಕಣ್ಣು ಮುಚ್ಚಿ ಶಾಂತವಾಗಿ ಕುಳಿತುಕೊಳ್ಳುವುದು ಉತ್ತಮ. ಒತ್ತಡದಿಂದಾಗುವ ತಲೆನೋವಿಗೆ ತಣ್ಣೀರು ಸೆಕ್‌ ಬಳಕೆ ಮಾಡಬಹುದು. ಸ್ನಾಯು ಬಿಗುವಿನಿಂದಾಗಿದ್ದರೆ ಬಿಸಿ ನೀರಿನ ಸೆಕ್‌ ಸಹಾಯವಾಗುತ್ತದೆ.

ಅಜೀರ್ಣಕ್ಕೆ ಸರಳ ಪರಿಹಾರಗಳು

ಇದನ್ನೂ ಓದಿ: ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ

➤ ಉಗುರುಬೆಚ್ಚಗಿನ ನೀರು ಕುಡಿಯಿರಿ
➤ ಜೀರಿಗೆ–ಬೆಲ್ಲ ನೀರು ಸೇವಿಸಬಹುದು
➤ ಭಾರವಾದ, ಎಣ್ಣೆ–ಖಾರ ಆಹಾರಗಳನ್ನು ತಾತ್ಕಾಲಿಕವಾಗಿ ತಪ್ಪಿಸಿರಿ
➤ ಮೊಸರು ಅಥವಾ ನಿಂಬೆಹಣ್ಣು ನೀರು ದೇಹದ ಉಷ್ಣ ತಗ್ಗಿಸಲು ಸಹಾಯ ಮಾಡುತ್ತದೆ
➤ ಶುಂಠಿಗೆ ಆಂಟಿ–ಇನ್‌ಫ್ಲಾಮೇಟರಿ ಗುಣವಿದ್ದು ತಲೆನೋವಿಗೆ ಸಹಕಾರಿ.
ಶುಂಠಿ ರಸ + ಜೇನು ಸೇರಿಸಿ ಸೇವಿಸಿದರೆ ವಾಂತಿ ಭಾವ, ಅಜೀರ್ಣ ಮತ್ತು ತಲೆನೋವಿಗೆ ತ್ವರಿತ ಪರಿಹಾರ.
➤ ಕುತ್ತಿಗೆಗೆ ಮತ್ತು ತಲೆ ಭಾಗಕ್ಕೆ ಹಿತಕರ ಮಸಾಜ್ ಮಾಡಿದರೆ ರಕ್ತ ಸಂಚಾರ ಸುಧಾರಿಸಿ ತಲೆನೋವು ಕಡಿಮೆಯಾಗುತ್ತದೆ.
➤ 6–8 ಗಂಟೆಗಳ ನಿದ್ರೆ ತಲೆನೋವಿನಿಂದ ದೂರ ಇರಲು ಮುಖ್ಯ. ನಿದ್ರೆ ಕೊರತೆ ದೇಹದ ಉಷ್ಣ ಹೆಚ್ಚಲು ಕಾರಣವಾಗಬಹುದು.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಕೆಳಗಿನ ಲಕ್ಷಣಗಳು ಇದ್ದರೆ ವೈದ್ಯರ ಸಲಹೆ ಅವಶ್ಯ:

ಇದನ್ನೂ ಓದಿ: ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ

➤ ನೋವು ಮರುಕಳಿಸುತ್ತಿರುವುದು ಅಥವಾ ದಿನದಿಂದ ದಿನಕ್ಕೆ ಹೆಚ್ಚಾಗುವುದು
➤ ವಾಂತಿ, ತಲೆಸುತ್ತು, ಜ್ವರ
➤ ದೃಷ್ಟಿ ಮಸುಕಾಗುವುದು
➤ ಮಾತನಾಡಲು ತೊಂದರೆ

ತಲೆನೋವು ಹಲವು ಕಾರಣಗಳಿಂದ ಬರುವುದರಿಂದ, ತಕ್ಷಣ ಮಾತ್ರೆ ಸೇವಿಸುವ ಬದಲು ಕಾರಣವನ್ನು ಗುರುತಿಸಿ ಸರಿಯಾದ ಕ್ರಮ ಕೈಗೊಳ್ಳುವುದೇ ಉತ್ತಮ.
ಅಜೀರ್ಣ–ಉಷ್ಣದಿಂದ ತಲೆನೋವು ಬಂದರೆ ಸರಳ ಮನೆೋಪಚಾರಗಳಿಂದಲೇ ಪರಿಹಾರ ಸಿಗುತ್ತದೆ.

Web Add
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಇಂದು ಐಪಿಎಲ್ ಹಬ್ಬ ಪ್ರಾರಂಭ : RCB, CSK,MI ವಿಶೇಷ ಗಮನ
ಇಂದು ಐಪಿಎಲ್ ಹಬ್ಬ ಪ್ರಾರಂಭ : RCB, CSK,MI ವಿಶೇಷ ಗಮನ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ
ಉಳ್ಳಾಲ:ಅಪರಾಧ ಹಿನ್ನೆಲೆಯ ವ್ಯಕ್ತಿ ಹತ್ಯೆ: ಬೈಕ್ ಅಡ್ಡಗಟ್ಟಿ ದಾಳಿ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ
ನಾಗಮೋಹನದಾಸ್ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಒತ್ತಾಯ
Prajapara News Kannada