Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ • 🔥
Advertisement

ಮೈ ಲಾರ್ಡ್ಸ್,ನಾವು ನಿಜಕ್ಕೂ ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆಯೇ?

ಮೈ ಲಾರ್ಡ್ಸ್,ನಾವು ನಿಜಕ್ಕೂ ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆಯೇ?

ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜಾತಿ ತಾರತಮ್ಯವನ್ನು ತಡೆಗಟ್ಟುವ ಉದ್ದೇಶದಿಂದ ಯುಜಿಸಿಯು ಇತ್ತೀಚೆಗೆ ಹೊರಡಿಸಿದ್ದ ಹೊಸ ನಿಯಾಮಾವಳಿಯ ವಿರುದ್ಧ ತಮ್ಮ ಮುಂದೆ ಬಂದಿರುವ ಪ್ರಕರಣವನ್ನು ವಿಚಾರಿಸುವ ಸಂದರ್ಭದಲ್ಲಿ, ಗೌರವಾನ್ವಿತ ಪೀಠವು ಒಂದು ಅತೀ ಮಹತ್ವದ ಪ್ರಶ್ನೆಯನ್ನು ಎತ್ತಿದೆ —
“ಜಾತಿರಹಿತ ಸಮಾಜವನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಮುಂದೆ ಸಾಗುತ್ತಿದ್ದೇವೆಯೇ, ಇಲ್ಲವೇ ಹಿಂದೆ ಹೋಗುತ್ತಿದ್ದೇವೆಯೇ?”

ಈ ಪ್ರಶ್ನೆಯೊಂದಿಗೆ, ನ್ಯಾಯಾಲಯವು ನಾವು ಈಗಾಗಲೇ “ಜಾತಿರಹಿತ ಸಮಾಜ”ವನ್ನು ಸಾಧಿಸಿದ್ದೇವೆ ಅಥವಾ ಅದರ ಅಂಚಿನಲ್ಲಿದ್ದೇವೆ ಎಂಬ ಭಾವನೆಯನ್ನು ವ್ಯಕ್ತಪಡಿಸಿ, ಈ ಹೊಸ ನಿಯಮಗಳು ಮತ್ತೆ ಜಾತಿಯ ವಿಷವನ್ನು ಬಿತ್ತುವ ಪ್ರಯತ್ನವೆಂದು ಅಭಿಪ್ರಾಯಪಟ್ಟಿದೆ.

ಮೈ ಲಾರ್ಡ್ಸ್,
ನೀವು ಹೇಳಿದಂತೆ ನಾವು ಎಷ್ಟು ಅದ್ಭುತವಾಗಿ, ಸಂಪೂರ್ಣವಾಗಿ ಜಾತಿರಹಿತ ಸಮಾಜವನ್ನು ನಿರ್ಮಿಸಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಒಂದು ಸಣ್ಣ ಘಟನೆ ಇಲ್ಲಿದೆ — ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಘಟನೆ. 91 ವರ್ಷದ ಮಹಾರ್‌ ದಲಿತ ಮಹಿಳೆಯೊಬ್ಬರು ಮೃತಪಟ್ಟ ನಂತರ, ಆಕೆಯ ಅಂತ್ಯಕ್ರಿಯೆಯನ್ನು ಸ್ಮಶಾನದಲ್ಲಿ ನಡೆಸಲು ಆಕೆಯ ಕುಟುಂಬಕ್ಕೆ ಅವಕಾಶ ದೊರೆಯಲಿಲ್ಲ. ಕಾರಣ — ಸ್ಮಶಾನಕ್ಕೆ ಹೋಗುವ ಪ್ರವೇಶ ಮಾರ್ಗವನ್ನು “ಅತಿಕ್ರಮಿಸಲಾಗಿದೆ” ಎಂಬ ನೆಪ.
ಅಂತಿಮವಾಗಿ ಆ ವೃದ್ಧೆಯ ಕುಟುಂಬವು ಆಕೆಯ ಅಂತ್ಯಸಂಸ್ಕಾರವನ್ನು ರಸ್ತೆಯ ಮಧ್ಯದಲ್ಲೇ, ಯಾವುದೇ ವಿಧಿವಿಧಾನವಿಲ್ಲದೆ, ನೆರವೇರಿಸಬೇಕಾಯಿತು. ಅಂತ್ಯಕ್ರಿಯೆಯನ್ನು ತಡೆಯಲು ಯತ್ನಗಳಾದವು. ಆದರೆ ರಸ್ತೆ ಚೌಕದಲ್ಲೇ ಚಿತೆಗೆ ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕುಟುಂಬಕ್ಕೆ ಬೇರೆ ದಾರಿಯೇ ಇರಲಿಲ್ಲ.

ಪಾಪ, ಮೈ ಲಾರ್ಡ್ಸ್,
ಈ ದಲಿತ ಕುಟುಂಬಕ್ಕೆ ನಾವು ನಿರ್ಮಿಸಿರುವ “ಜಾತಿರಹಿತ ಸಮಾಜ”ದ ಬಗ್ಗೆ ತಿಳಿದೇ ಇರಲಿಲ್ಲ!
ಅವರು ಇನ್ನೂ ಜಾತಿಯಿದೆ ಎಂದು ಭ್ರಮೆಯಲ್ಲಿ ಬದುಕುತ್ತಿದ್ದಾರೆ!

ಏನು ಮಾಡುವುದು?
ಈ ದಲಿತರು ಬಹುಶಃ ಹುಚ್ಚರಾಗಿದ್ದಾರೆ. ನಾವು ಸೃಷ್ಟಿಸಿರುವ ಆದರ್ಶ, ಜಾತಿರಹಿತ, ದೇಶಭಕ್ತ ಸಮಾಜವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಅವರು ಸುಮ್ಮನೆ ಸವರ್ಣರನ್ನು ದೂಷಿಸುತ್ತಾರೆ. ಹಿಂದಕ್ಕೆ ಹೋಗುವುದರಲ್ಲಿ ಅವರಿಗೆ ಅಪಾರ ಸಂತೋಷ. ಜಾತಿರಹಿತ ದೇಶಭಕ್ತರೊಂದಿಗೆ ಮುಂದೆ ಸಾಗಲು ಅವರಿಗೆ ಆಸಕ್ತಿ ಇಲ್ಲ. ಅವರಿಗೆ ಯಾವಾಗಲೂ “ಹಿಂದೆ ಉಳಿಯುವುದೇ” ಇಷ್ಟ.

ಇದನ್ನೂ ಓದಿ: ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ

ಹಾಗಾಗಿ, ನೀವು ಹೇಳಿದ ಮಾತು ನಿಜವಾಗಿಯೂ ಸತ್ಯ ಬಿಡಿ ಮೈ ಲಾರ್ಡ್ — ನಾವು ಜಾತಿರಹಿತ ಸಮಾಜವನ್ನು ಸಂಪೂರ್ಣವಾಗಿ ಸ್ಥಾಪಿಸಿದ್ದೇವೆ. ಅದು ದಲಿತರು ಮತ್ತು ಹಿಂದುಳಿದ ಜಾತಿಗಳಿಗೆ ಮಾತ್ರ ಕಾಣುತ್ತಿಲ್ಲ!

ಆದ್ದರಿಂದ, ಜಾತಿ ಆಧಾರಿತ ಶೋಷಣೆಯ ವಿರುದ್ಧ ಯಾವುದೇ ಕಾನೂನುಗಳನ್ನು ಸರ್ಕಾರಗಳು ತರಬಾರದು.
ಯಾಕೆಂದರೆ ಸಮಸ್ಯೆಯೇ ಇಲ್ಲವಂತೆ!

ಆದರೆ, ಮೈ ಲಾರ್ಡ್ಸ್, ಒಮ್ಮೆ ನಿಲ್ಲಿಸಿ ಯೋಚಿಸೋಣ.

ನಾವು ತಾರತಮ್ಯವನ್ನು ಹೆಸರಿಸುತ್ತೇವೆ ಎಂಬ ಕಾರಣಕ್ಕೆ “ಹಿಂದಕ್ಕೆ ಹೋಗುತ್ತಿದ್ದೇವೋ?”
ಅಥವಾ ಜಾತಿ ತಾರತಮ್ಯವನ್ನು ನಿರಾಕರಿಸುವುದರಿಂದಲೇ ನಾವು ಹಿಂದೆ ಹೋಗುತ್ತಿದ್ದೇವೋ?

ಇದನ್ನೂ ಓದಿ: ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ

ರೋಗವೊಂದನ್ನು ಗುಣಪಡಿಸಲು, ಮೊದಲು ರೋಗವಿದೆ ಎಂದು ಒಪ್ಪಿಕೊಳ್ಳಬೇಕಲ್ಲವೇ?

ರೋಗವನ್ನೇ ನಿರಾಕರಿಸಿದರೆ, ಅದು ಗುಣವಾಗುತ್ತದೆಯೇ?

ಅಥವಾ ರೋಗವಿದೆ ಎಂದು ಒಪ್ಪಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದಾಗಲೇ ಗುಣವಾಗುತ್ತದೆಯೇ?

ಜಾತಿ ತಾರತಮ್ಯವನ್ನು ಹೆಸರಿಸುವುದೇ ಸಮಸ್ಯೆಯಲ್ಲ.
ಜಾತಿ ತಾರತಮ್ಯವನ್ನು ನಿರಾಕರಿಸುವುದೇ ಸಮಸ್ಯೆ.

ಇದನ್ನೂ ಓದಿ: ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’

ನಾವು ಜಾತಿರಹಿತ ಸಮಾಜವನ್ನು ಸಾಧಿಸಿದ್ದೇವೆ ಎಂಬ ಘೋಷಣೆಗಳಿಂದ ಅಲ್ಲ, ಜಾತಿಯ ಅನುಭವವನ್ನು ಅನುಭವಿಸುತ್ತಿರುವವರ ಮಾತುಗಳನ್ನು ಕೇಳಿದಾಗ ಮಾತ್ರ ಆ ಸಮಾಜದ ನಿಜವಾದ ಚಿತ್ರ ನಮಗೆ ಕಾಣುತ್ತದೆ.

ಮೈ ಲಾರ್ಡ್ಸ್,
ಜಾತಿರಹಿತ ಸಮಾಜದ ಬಗ್ಗೆ ಮಾತನಾಡುವ ಮುನ್ನ, ಜಾತಿಯ ನೋವು ಅನುಭವಿಸುತ್ತಿರುವವರನ್ನು “ಹಿಂದಕ್ಕೆ ಹೋಗುವವರು” ಎಂದು ತಳ್ಳಿ ಹಾಕುವುದನ್ನು ನಿಲ್ಲಿಸೋಣ. ಅಷ್ಟೇ ಅಲ್ಲವೇ — ನ್ಯಾಯದ ಮೊದಲ ಹೆಜ್ಜೆ?

ಹರಿರಾಮ್ ಎ. ವಕೀಲರು

😀
0
😍
0
😢
0
😡
0
👍
2
👎
0

Web Add
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
Prajapara News Kannada