ಭಾರತದ ಇತಿಹಾಸದಲ್ಲಿ ಅನೇಕ ರಾಜರು ಬಂದಿದ್ದಾರೆ. ಆದರೆ ಮಾನವೀಯತೆ, ಧರ್ಮ, ಸಮಾನತೆ ಮತ್ತು ಶಾಂತಿಯ ಆಡಳಿತವನ್ನು ಜಗತ್ತಿಗೆ ತೋರಿಸಿದ ಚಕ್ರವರ್ತಿ ಎಂದರೆ ಅದು ಸಾಮ್ರಾಟ್ ಅಶೋಕ. ಅಶೋಕ ಚಕ್ರವರ್ತಿ ಕೇವಲ ಮೌರ್ಯ ಸಾಮ್ರಾಜ್ಯದ ರಾಜನಲ್ಲ — ಇಂದಿನ ಭಾರತದ ಗುರುತಿನ ಒಂದು ಮಹತ್ವದ ಆಧಾರ.
ಕಳಿಂಗ ಯುದ್ಧದ ನಂತರ ಅಶೋಕನ ಜೀವನವೇ ಬದಲಾಗಿದೆ. ಯುದ್ಧದ ಹಿಂಸಾಚಾರ ನೋಡಿ ಅಶೋಕನು ಅಹಿಂಸೆ ಮತ್ತು ಧರ್ಮದ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಜನರಿಗೆ ನ್ಯಾಯ, ಸಮಾನತೆ ಮತ್ತು ಮಾನವೀಯತೆ ನೀಡಿದ ಮೊದಲ ಆಡಳಿತಗಾರರಲ್ಲಿ ಅಶೋಕ ಪ್ರಮುಖರು.
ಇಂದು ನಾವು ಹೆಮ್ಮೆಯಿಂದ ಬಳಸುವ ಭಾರತದ ರಾಷ್ಟ್ರ ಲಾಂಛನ — ಅಶೋಕ ಸಿಂಹಸ್ತಂಭದಿಂದ ಬಂದಿದೆ. ರಾಷ್ಟ್ರಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವೂ ಅಶೋಕನ ಧರ್ಮಚಕ್ರದ ಸಂಕೇತ. ಅಂದರೆ ಭಾರತದ ರಾಷ್ಟ್ರೀಯ ಗುರುತುಗಳಲ್ಲೇ ಅಶೋಕನ ಚಿಂತನೆಗಳು ಅಡಕವಾಗಿವೆ. ಇದು ಅಶೋಕ ಚಕ್ರವರ್ತಿಯ ಮಹತ್ವವನ್ನು ಸ್ಪಷ್ಟಪಡಿಸುತ್ತದೆ.
ಅಶೋಕನ ಆಡಳಿತದಲ್ಲಿ ಧರ್ಮ ಎಂದರೆ ಒಂದು ಧರ್ಮವಲ್ಲ. ಎಲ್ಲ ಧರ್ಮಗಳಿಗೆ ಗೌರವ, ಎಲ್ಲರಿಗೂ ಸಮಾನತೆ ಎಂಬುದು ಅವನ ಧೋರಣೆ. ಶಾಸನಗಳ ಮೂಲಕ ಜನರಿಗೆ ನೈತಿಕ ಜೀವನದ ಸಂದೇಶ ನೀಡಿದ ಮೊದಲ ಆಡಳಿತಗಾರರಲ್ಲಿ ಅಶೋಕ ಒಬ್ಬರು. ಆಸ್ಪತ್ರೆಗಳು, ಮರ ನೆಡುವ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ — ಇವೆಲ್ಲವೂ ಅಶೋಕ ಆಡಳಿತದ ಭಾಗವಾಗಿತ್ತು.
ಇಂದು ಪ್ರಶ್ನೆ ಏನೆಂದರೆ — ಭಾರತದ ರಾಷ್ಟ್ರ ಚಿಹ್ನೆಗಳಿಗೆ ಮೂಲವಾದ ಅಶೋಕ ಚಕ್ರವರ್ತಿಯನ್ನು ನಾವು ಎಷ್ಟು ನೆನಪಿಸುತ್ತಿದ್ದೇವೆ? ಅಶೋಕನ ಮೌಲ್ಯಗಳು ನಮ್ಮ ಸಂವಿಧಾನದ ಆತ್ಮವಾಗಿದ್ದರೂ, ಅವನ ಸ್ಮರಣೆಯನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸುವ ಸಂಪ್ರದಾಯ ಹೆಚ್ಚು ಕಾಣುವುದಿಲ್ಲ.
ಗಣೇಶ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳಿಗೆ ಸರ್ಕಾರ ರಜೆ ನೀಡುತ್ತದೆ. ಆದರೆ ಅವುಗಳಿಗೂ ನಿಖರ ಇತಿಹಾಸದ ಜನ್ಮ ದಿನಾಂಕಗಳಿಲ್ಲ. ಆದರೂ ಸಾಮಾಜಿಕ ಮಹತ್ವದಿಂದ ಆಚರಣೆ ನಡೆಯುತ್ತದೆ. ಇದೇ ರೀತಿಯಲ್ಲಿ ಭಾರತದ ಚಿಹ್ನೆಗಳ ಮೂಲವಾದ ಅಶೋಕ ಚಕ್ರವರ್ತಿಯ ಸ್ಮರಣೆಯನ್ನು ಕೂಡ ಗೌರವಿಸುವ ಅಗತ್ಯ ಇದೆ ಎಂಬ ಅಭಿಪ್ರಾಯಗಳು ಹೆಚ್ಚಾಗುತ್ತಿವೆ.
ಅಶೋಕ ಚಕ್ರವರ್ತಿ ಕೇವಲ ಬೌದ್ಧ ಇತಿಹಾಸದ ಭಾಗವಲ್ಲ. ಅವರು ಭಾರತದ ಆಡಳಿತದ ಮೌಲ್ಯಗಳನ್ನು ರೂಪಿಸಿದ ನಾಯಕ. ಧರ್ಮಚಕ್ರ — ನ್ಯಾಯದ ಸಂಕೇತ. ಸಿಂಹಸ್ತಂಭ — ಆಡಳಿತದ ಶಕ್ತಿ. ಇವೆಲ್ಲವೂ ಅಶೋಕನ ಪರಂಪರೆಯೇ.
ಇಂದು ಸಮಾಜದಲ್ಲಿ ವಿಭಜನೆಗಿಂತ ಏಕತೆ ಬೇಕಾಗಿದೆ. ಅಶೋಕನ ಸಂದೇಶ — ಅಹಿಂಸೆ, ಸಹಿಷ್ಣುತೆ, ಸಮಾನತೆ — ಇಂದಿನ ಭಾರತಕ್ಕೆ ಅತ್ಯಂತ ಅಗತ್ಯ. ಆದ್ದರಿಂದ ಅಶೋಕ ಚಕ್ರವರ್ತಿಯನ್ನು ನೆನಪಿಸುವುದು ಕೇವಲ ಇತಿಹಾಸವಲ್ಲ, ಅದು ಭವಿಷ್ಯಕ್ಕೆ ಮಾರ್ಗದರ್ಶನ.
ಸಾಮ್ರಾಟ್ ಅಶೋಕ ಚಕ್ರವರ್ತಿ — ಭಾರತದ ಹೆಮ್ಮೆ.