ಸುಳ್ಯ ತಾಲೂಕಿನ ಅಜ್ಜಾವರ ಮೇನಾಲದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ದಿ. ಸುಧೀರ್ ರೈ ಮೇನಾಲರವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ವಿಷ್ಣು ಯುವಕ ಮಂಡಲ (ರಿ.) ಹಾಗೂ ವಿಷ್ಣು ಕ್ರಿಕೆಟರ್ಸ್ ಮೇನಾಲ ವತಿಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸುಧೀರ್ ರೈ ಮೇನಾಲರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪನಮನವನ್ನು ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಪ್ರಸಾದ್ ರೈ ಮೇನಾಲ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ದಿ. ಸುಧೀರ್ ರೈ ಮೇನಾಲರ ಜೀವನ, ಸಮಾಜಮುಖಿ ಚಟುವಟಿಕೆಗಳು ಹಾಗೂ ಅವರ ಸೇವಾ ಮನೋಭಾವದ ಬಗ್ಗೆ ಸ್ಮರಿಸಿದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸುಧೀರ್ ರೈ ಮೇನಾಲರ ಒಡನಾಡಿಗಳಾದ ವಿಷ್ಣು ಯುವಕ ಮಂಡಲ (ರಿ.) ಅಧ್ಯಕ್ಷ ರಂಜೀತ್ ರೈ ಮೇನಾಲ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದ.ಕ. ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕೆ. ಪಲ್ಲತ್ತಡ್ಕ, ವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷ ಶ್ರೀಧರ್ ಮಣಿಯಾಣಿ ಮೇನಾಲ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಅಜ್ಜಾವರ ಪಂಚಾಯತ್ ಸಿಬ್ಬಂದಿ ಲೋಕೇಶ್ ಪಿ.ಆರ್. ಪಲ್ಲತ್ತಡ್ಕ ಹಾಗೂ ಅಡ್ಪಂಗಾಯ ಪ್ರೌಢ ಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಸೌಕತ್ ಆಲಿ ಮೇನಾಲ ಮಾತನಾಡಿ, ಸುಧೀರ್ ರೈ ಮೇನಾಲರ ಸ್ನೇಹಪರತೆ, ಸಮಾಜದೊಂದಿಗೆ ಅವರ ನಂಟು ಮತ್ತು ಸೇವಾ ಕಾರ್ಯಗಳನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಶೆಟ್ಟಿ, ಜಯರಾಮ ಮೇನಾಲ, ಸದಾನಂದ ರೈ ಮೇನಾಲ, ಶರಣ್ಯ ರಾವ್ ತುದಿಯಡ್ಕ, ಉಮೇಶ್ ಇರಂತಮಜಲು, ಭಾಸ್ಕರ್ ಕಲ್ಲಗುಡ್ಡೆ, ಕೃಷ್ಣಪ್ಪ ಕಲ್ಲಗುಡ್ಡೆ, ಸಿದ್ಧೀಕ್ ಇರಂತಮಜಲು, ಹಾಭೀದ್ ಮೇನಾಲ, ಸುಂದರ ಬಿ.ಕೆ. ಬಾಡೇಲು, ದಾಮೋದರ ಕುಲಾಲ್, ರಶೀದ್ ಇರಂತಮಜಲು, ಗಿರೀಶ್ ಕಲ್ಲಗುಡ್ಡೆ, ಮಧುಸೂಧನ್ ಕಾಟಿಪಳ್ಳ, ಗಿರೀಶ್ ನಾಯ್ಕ, ಯಜ್ಞೇಶ್ ಮೇನಾಲ, ರಮೇಶ್ ಮೇನಾಲ, ಅನಿಲ್ ಇರಂತಮಜಲು, ರಾಮ ಬಾಡೇಲು, ಸಂದೇಶ್ ಇರಂತಮಜಲು ಸೇರಿದಂತೆ ಹಲವರು ಭಾಗವಹಿಸಿ ದಿವಂಗತರಿಗೆ ಗೌರವ ನಮನ ಸಲ್ಲಿಸಿದರು.