ಡಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಖೆಯಲ್ಲಿ AVSS ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಉದ್ದ್ಘಾಟನಾ ಕಾರ್ಯಕ್ರಮ ಜನವರಿ 4 ರಂದು ಆಯೋಜಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಖೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು ಮತ್ತು ಸಂಘದ ಸೇವಾ ಪ್ರತಿನಿಧಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆ ಸ್ಥಾಪಕರು ಮನೋಹರ್ ಪಿ.ಬಿ. ಪಲ್ಲತ್ತಡ್ಕ, ನಿರ್ವಹಣಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ಕರುಣಾಕರ್ ಪಲ್ಲತ್ತಡ್ಕ, ಚೋಮ ಗಾಂಧಿನಗರ, ಹರೀಶ್ ಮೇನಾಲ, ಸುರೇಶ್ ಬಯಂಬು, ಸಹಕಾರ ನೀಡುವ ಪ್ರಕಾಶ್ ಪಾತೆಟ್ಟಿ, ಸತೀಶ್ ಬೂಡುಮಕ್ಕಿ, ವಿಜಯ್ ಆಲಡ್ಕ, ಚಿದಾನಂದ ಗಂಧದಗುಡ್ಡೆ, ಮತ್ತು ಸಂಘದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಸಮುದಾಯ ಸೇವಾ ಚಟುವಟಿಕೆಗಳ ಪ್ರಚಾರ ಹಾಗೂ ಸಂಘದ ಕಾರ್ಯಕ್ಷಮತೆಯನ್ನು ಜನರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಯಿತು.


😀
0
😍0
😢0
😡0
👍3
👎0