ಹುಬ್ಬಳ್ಳಿ: ಸಿದ್ಧಾರೂಢರ ಆಶೀರ್ವಾದದೊಂದಿಗೆ ಪ್ರಾರಂಭವಾದ ಲಕ್ಷ್ಮೀ ಟೂರ್ಸ್ & ಟ್ರಾವೆಲ್ಸ್ ಇಂದು ಹುಬ್ಬಳ್ಳಿ–ಧಾರವಾಡ ಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಪ್ರವಾಸ ಸಂಸ್ಥೆಯಾಗಿ ಬೆಳೆಯುತ್ತಿದೆ.
ಸಂಸ್ಥೆಯ ಮಾಲೀಕರಾದ ಸುರೇಶ್ ಅವರು ಶ್ರದ್ಧೆ, ಪರಿಶ್ರಮ ಮತ್ತು ಅಚ್ಚುಕಟ್ಟಾದ ನಿರ್ವಹಣೆಯ ಮೂಲಕ ಸಂಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಇವರ ಮುಖ್ಯ ಉದ್ದೇಶವಾಗಿದೆ.
ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವವರು ಮಂಜುನಾಥ್ ಕುಕನೂರ. ಆರಂಭದಲ್ಲಿ ಚಾಲಕರಾಗಿ ಸೇವೆ ಆರಂಭಿಸಿದ ಅವರು ತಮ್ಮ ನಿಯತ್ತಿನ ಕೆಲಸ, ಪ್ರಾಮಾಣಿಕತೆ ಹಾಗೂ ಸರಳ ಸ್ವಭಾವದಿಂದ ಎಲ್ಲರ ಮನ ಗೆದ್ದಿದ್ದಾರೆ. ಲಕ್ಷ್ಮೀ ಟೂರ್ಸ್ & ಟ್ರಾವೆಲ್ಸ್ ಮೂಲಕ ಪ್ರಯಾಣಿಸುವ ಅನೇಕ ಗ್ರಾಹಕರಿಗೆ ಅವರು ಹಾಟ್ ಫೇವರೆಟ್ ಆಗಿದ್ದಾರೆ ಎನ್ನಬಹುದು.
ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ್ ಕುಕನೂರ ಅವರು ಇದೀಗ ಮ್ಯಾನೇಜರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಅವರ ನಿಷ್ಠಾವಂತ ಸೇವೆ ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಹುಬ್ಬಳ್ಳಿ–ಧಾರವಾಡ ಸುತ್ತಮುತ್ತ ಲಕ್ಷ್ಮೀ ಟೂರ್ಸ್ & ಟ್ರಾವೆಲ್ಸ್ ತನ್ನ ವಿಶ್ವಾಸಾರ್ಹ ಸೇವೆಯಿಂದ ವಿಶಿಷ್ಟ ಸ್ಥಾನವನ್ನು ಗಳಿಸಿದೆ.
ಈ ಸೇವಾ ಮನೋಭಾವ ಇದೇ ರೀತಿ ಮುಂದುವರಿದು, ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಲಕ್ಷ್ಮೀ ಟೂರ್ಸ್ & ಟ್ರಾವೆಲ್ಸ್ ಇನ್ನಷ್ಟು ಹೆಸರು ಮಾಡಲಿ ಎಂಬುದು ಸ್ಥಳೀಯರ ಆಶಯವಾಗಿದೆ.
ಬುಕಿಂಗ್ ಹಾಗೂ ಮಾಹಿತಿಗಾಗಿ ಈ ನಂಬರಿಗೆ ಸಂಪರ್ಕಿಸಬಹುದು;
📱 9902670600
📱 8951310750