ಸುಳ್ಯ: ಸುಳ್ಯ ತಾಲೂಕಿನ ವ್ಯಾಪ್ತಿಯನ್ನು ಬಿಟ್ಟು ಹೋಗದೇ ಅಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ. ಕಳೆದ ಕೆಲವು ದಿನಗಳಿಂದ ಸುಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿದ್ದು, ವಿಶೇಷವಾಗಿ ಮಾರ್ಕಜ–ಆರಂತೋಡು ರಸ್ತೆ ಮಾರ್ಗದಲ್ಲಿ ರಾತ್ರಿ ವೇಳೆ ದಿನನಿತ್ಯ ಆನೆಗಳು ಓಡಾಡುತ್ತಿರುವುದು ಕಂಡುಬಂದಿದೆ.
ಸ್ಥಳೀಯರ ಮಾಹಿತಿಯಂತೆ, ಆಹಾರ ಹಾಗೂ ನೀರಿನ ಹುಡುಕಾಟಕ್ಕಾಗಿ ಆನೆಗಳು ಮಾನವ ವಾಸದ ಪ್ರದೇಶಗಳತ್ತ ಬರುತ್ತಿದ್ದು, ಈ ಪ್ರದೇಶವನ್ನು ಶಾಶ್ವತ ಸಂಚಾರ ಮಾರ್ಗವಾಗಿ ಬಳಸುತ್ತಿರುವ ಸಾಧ್ಯತೆ ಇದೆ. ಇದರಿಂದ ರಾತ್ರಿ ವೇಳೆಯ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಪಾಯ ಎದುರಾಗುತ್ತಿದೆ. ಆನೆಗಳು ರಸ್ತೆ ದಾಟುವ ವೇಳೆ ಅಚಾನಕ್ ಎದುರಾದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದುರಿಂದ, ರಾತ್ರಿ ಸಮಯದಲ್ಲಿ ಸಂಚರಿಸುವವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನಲಾಗುತ್ತಿದೆ.
😀
0
😍0
😢0
😡0
👍1
👎0