Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಇತಿಹಾಸದ ಪುಟಗಳಲ್ಲಿ ಪ್ರತಿಧ್ವನಿಸಿದ ಧ್ವನಿ: ಮಹಾಡ್ ಭಾಷಣ ಮತ್ತು ಬಾಬಾಸಾಹೇಬರ ಸ್ವರಾಜ್ಯದ ಅರ್ಥ

ಇತಿಹಾಸದ ಪುಟಗಳಲ್ಲಿ ಪ್ರತಿಧ್ವನಿಸಿದ ಧ್ವನಿ: ಮಹಾಡ್ ಭಾಷಣ ಮತ್ತು ಬಾಬಾಸಾಹೇಬರ ಸ್ವರಾಜ್ಯದ ಅರ್ಥ

ಇಂದು ಜನವರಿ 6, ಇಲ್ಲಿಂದ 87 ವರ್ಷ ಹಿಂದೆ 1939ರ ಜನವರಿ 6 ಮಹಾಡ್ ಎಂಬ ಸ್ಥಳದಲ್ಲಿ ಸುಮಾರು ಆರು ಸಾವಿರ ರೈತರು ಸೇರಿದ್ದ ಸಭೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮಾಡಿದ ಭಾಷಣವು ಕೇವಲ ರಾಜಕೀಯ ಭಾಷಣವಾಗಿರಲಿಲ್ಲ. ಅದು ಸಮಾಜದ ಅಂತಃಕರಣವನ್ನು ಕದಲಿಸಿದ ಪ್ರಶ್ನೆಯಾಗಿತ್ತು; ಜೊತೆಗೆ ಉತ್ತರವಾಗಿಯೂ ಪರಿಣಮಿಸಿತು.

ಆ ದಿನ ಬಾಬಾಸಾಹೇಬರು “ಸ್ವರಾಜ್ಯ” ಎಂಬ ಪದಕ್ಕೆ ಹೊಸ ಅರ್ಥವನ್ನು ನೀಡಿದರು. ಅವರ ಮಾತಿನಲ್ಲಿ, ಸ್ವರಾಜ್ಯ ಎಂದರೆ ಕೇವಲ ಅಧಿಕಾರದ ಬದಲಾವಣೆ ಅಲ್ಲ. ಅದು ನಿಜವಾದ ಸ್ವಾತಂತ್ರ್ಯ, ಮಾನವ ಗೌರವ ಮತ್ತು ಸಮಾನತೆಯ ಬದುಕಿನ ಸಂಕೇತವಾಗಿತ್ತು.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಬಾಬಾಸಾಹೇಬರು ಕೇಳಿದ ಪ್ರಶ್ನೆಗಳು ತುಂಬಾ ಸರಳವಾಗಿದ್ದರೂ ಅತ್ಯಂತ ತೀವ್ರವಾಗಿದ್ದವು. “ನಮ್ಮದೇ ದೇಶದಲ್ಲಿ ಜನರಿಗೆ ತಿನ್ನಲು ಆಹಾರವಿಲ್ಲ. ವಾಸಿಸಲು ಮನೆ ಇಲ್ಲ. ಐಶ್ವರ್ಯ ಮತ್ತು ಸಮೃದ್ಧಿ ಇಲ್ಲದಿದ್ದರೆ, ಅಂತಹ ಸ್ವರಾಜ್ಯದಿಂದ ಏನು ಪ್ರಯೋಜನ?” ಎಂಬ ಅವರ ಪ್ರಶ್ನೆಗಳು ಜನಮನವನ್ನು ನಡುಗಿಸಿತು. ಅವರ ದೃಷ್ಟಿಯಲ್ಲಿ ಸ್ವರಾಜ್ಯ ಎಂದರೆ ಧ್ವಜ, ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯಷ್ಟೇ ಅಲ್ಲ. ಪ್ರತಿಯೊಬ್ಬ ಮಾನವನೂ ಮಾನವನಂತೆ ಬದುಕುವ ಹಕ್ಕು ಹೊಂದಿರುವ ರಾಜ್ಯವೇ ನಿಜವಾದ ಸ್ವರಾಜ್ಯ. ಸ್ವಾತಂತ್ರ್ಯ ಕೇವಲ ಪದವಾಗಿರದೆ, ಬದುಕಿನಲ್ಲಿ ಅನುಭವಿಸಬಹುದಾದ ಹಕ್ಕಾಗಿರಬೇಕು. ಸಮಾನತೆ ಕಾನೂನು ಪುಸ್ತಕಗಳಲ್ಲಿ ಮಾತ್ರವಲ್ಲದೆ, ಸಮಾಜದ ಪ್ರತಿದಿನದ ಜೀವನದಲ್ಲೂ ಕಾಣಿಸಬೇಕು.

“ಸ್ವಾತಂತ್ರ್ಯ, ಮಾನವೀಯತೆ ಮತ್ತು ಸಮಾನ ಹಕ್ಕುಗಳು ದೊರೆಯುವ ರಾಜ್ಯವೇ ನಮ್ಮ ಸ್ವರಾಜ್ಯ” ಎಂಬ ಬಾಬಾಸಾಹೇಬರ ಮಾತುಗಳು 1939ರಲ್ಲಿ ಕೇಳಿಬಂದಿದ್ದರೂ, ಅವು ಕೇಳುವ ಪ್ರಶ್ನೆಗಳು ಇಂದಿಗೂ ಜೀವಂತವಾಗಿವೆ.

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮರ್ಪಕ ಆಹಾರ ದೊರೆಯುತ್ತಿದೆಯೇ?, ಸಮಾನ ಹಕ್ಕುಗಳು ಇನ್ನೂ ಪುಸ್ತಕಗಳಲ್ಲೇ ಸೀಮಿತವಾಗಿವೆಯೇ?, ಬಾಬಾಸಾಹೇಬರು ಕನಸು ಕಂಡ ಸ್ವರಾಜ್ಯವನ್ನು ನಾವು ನಿಜವಾಗಿಯೂ ಸಾಧಿಸಿದ್ದೇವೆಯೇ?

ಬಾಬಾಸಾಹೇಬರ ಸ್ವರಾಜ್ಯ ಕೇವಲ ಘೋಷಣೆ ಅಥವಾ ಘೋಷವಾಕ್ಯವಲ್ಲ. ಅದು ನ್ಯಾಯಯುತ, ಮಾನವೀಯ ಮತ್ತು ಸಮಾನತೆಯ ಸಮಾಜದ ಘೋಷಣೆಯಾಗಿತ್ತು. ಇಂದು ಅವರ ಮಾತುಗಳನ್ನು ಕೇವಲ ನೆನಪಿಸಿಕೊಳ್ಳುವ ಕಾಲವಲ್ಲ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕಾಲ.

ಸ್ವರಾಜ್ಯ ಎಂದರೆ ಗೌರವ, ಸಮಾನತೆ ಮತ್ತು ಮಾನವೀಯತೆ ಎಂದು ನಂಬುವ ಪ್ರತಿಯೊಬ್ಬರೂ ಈ ವಿಚಾರವನ್ನು ಸಮಾಜದಲ್ಲಿ ಹರಡಬೇಕು. ಅದೇ ಬಾಬಾಸಾಹೇಬರಿಗೆ ಸಲ್ಲಿಸುವ ನಿಜವಾದ ಗೌರವ.

😀
0
😍
0
😢
0
😡
0
👍
2
👎
0

Web Add
Prajapara News Kannada