Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಮಂಗಳೂರು: ತಂದೆ–ಮಗಳ ಕಲಾ ಸಂಯುಕ್ತ ಪ್ರದರ್ಶನಕ್ಕೆ ಅದ್ಧೂರಿ ಆಹ್ವಾನ

ಮಂಗಳೂರು: ತಂದೆ–ಮಗಳ ಕಲಾ ಸಂಯುಕ್ತ ಪ್ರದರ್ಶನಕ್ಕೆ ಅದ್ಧೂರಿ ಆಹ್ವಾನ

ಮಂಗಳೂರು: ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ The Dapper Expo ಎಂಬ ವಿಶಿಷ್ಟ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಚಿತ್ರಕಲೆ, ರೇಖಾಚಿತ್ರ, ಮಂಡಲಾ ಆರ್ಟ್, ಫೋಟೋಗ್ರಫಿ ಹಾಗೂ ಸ್ಟ್ರಿಂಗ್ ಆರ್ಟ್ ಸೇರಿದಂತೆ ವಿವಿಧ ಕಲಾರೂಪಗಳನ್ನು ಒಳಗೊಂಡ ಈ ಪ್ರದರ್ಶನಕ್ಕೆ ಕಲಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.

ಬೆಂಗಳೂರು ಮೂಲದ ಉದಯ ಕೃಷ್ಣ ಜಿ. ಹಾಗೂ ಅವರ ಪುತ್ರಿ ನಿಯತಿ ಯು. ಭಟ್ ಅವರು ತಂದೆ–ಮಗಳು ಜೊತೆಯಾಗಿ ನಡೆಸುತ್ತಿರುವ ಈ ಕಲಾ ಪ್ರದರ್ಶನವು ಗಮನ ಸೆಳೆಯುತ್ತಿದೆ. ಪೀಳಿಗೆಗಳ ನಡುವಿನ ಕಲಾ ಸಂವಾದವನ್ನು ಪ್ರತಿಬಿಂಬಿಸುವ ಈ ಪ್ರಯತ್ನವು ವಿಶೇಷ ಮಹತ್ವ ಪಡೆದುಕೊಂಡಿದೆ.

ಪ್ರದರ್ಶನದ ಉದ್ಘಾಟನೆಯನ್ನು ಪ್ರೊ. ಜಿ. ಎನ್. ಭಟ್, ವಿಶ್ರಾಂತ ಪ್ರಾಂಶುಪಾಲರು ನೆರವೇರಿಸಲಿದ್ದು, ವಿಶ್ವ ಖ್ಯಾತಿಯ ಜಾದೂ ಕಲಾವಿದ ಪ್ರೊ. ಶಂಕರ್ ಹಾಗೂ ಸುಪ್ರಸಿದ್ಧ ಚಿತ್ರಕಲಾವಿದ ಶ್ರೀ ಗಣೇಶ ಸೋಮಯಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಈ ಕಲಾ ಪ್ರದರ್ಶನವು
ದಿನಾಂಕ: 17 ಜನವರಿ 2026, ಶನಿವಾರ
ಸಮಯ: ಅಪರಾಹ್ನ 3 ಗಂಟೆಗೆ ಉದ್ಘಾಟನೆ
ಸ್ಥಳ: ಪ್ರಸಾದ್ ಆರ್ಟ್ ಗ್ಯಾಲರಿ, ಎಮ್.ಜಿ. ರಸ್ತೆ, ಮಂಗಳೂರು

ಪ್ರದರ್ಶನ ವೀಕ್ಷಣೆಯ ಸಮಯ:

  • ಜನವರಿ 17: ಅಪರಾಹ್ನ 3:30ರಿಂದ ಸಂಜೆ 7:30ರವರೆಗೆ
  • ಜನವರಿ 18: ಬೆಳಗ್ಗೆ 10ರಿಂದ ಸಂಜೆ 7:30ರವರೆಗೆ
  • ಜನವರಿ 19: ಬೆಳಗ್ಗೆ 10ರಿಂದ ಸಂಜೆ 7:30ರವರೆಗೆ

ಕಲೆಗೆ ಆಸಕ್ತರಾದವರು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಲಾ ಸಂಭ್ರಮವನ್ನು ಅನುಭವಿಸುವಂತೆ ಆಯೋಜಕರು ಆದರಪೂರ್ವಕವಾಗಿ ಆಹ್ವಾನಿಸಿದ್ದಾರೆ.

😀
0
😍
0
😢
0
😡
0
👍
1
👎
0

Web Add
Prajapara News Kannada