Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಮೈಸೂರಿನಲ್ಲಿ ಧಮ್ಮನಡಿಗೆ: ಬೋಧ್ ಗಯಾ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ

ಮೈಸೂರಿನಲ್ಲಿ ಧಮ್ಮನಡಿಗೆ: ಬೋಧ್ ಗಯಾ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ

ಮೈಸೂರು: ಬೋಧ್ ಗಯಾ ಮಹಾವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಇಂದು ಮೈಸೂರಿನಲ್ಲಿ ಭಕ್ತಿಪೂರ್ವಕವಾಗಿ “ಧಮ್ಮನಡಿಗೆ” ಕಾರ್ಯಕ್ರಮ ನಡೆಯಿತು. ಪೂಜ್ಯ ಬಂತೇ ಬೋಧಿರತ್ನ ಅವರು ಧಮ್ಮನಡಿಗೆಗೆ ಚಾಲನೆ ನೀಡಿದರು.

ಮೈಸೂರಿನ ಟೌನ್ ಹಾಲ್ ಬಳಿಯಿರುವ ಡಾ. ಬಾಬಾಸಾಹೇಬರ ಪ್ರತಿಮೆಯಿಂದ ವಿಶ್ವಮೈತ್ರಿ ಬುದ್ಧವಿಹಾರದವರೆಗೆ ನೂರಾರು ಬೌದ್ಧ ಅನುಯಾಯಿಗಳು ಧಮ್ಮನಡಿಗೆ ನಡೆಸಿದರು. ಈ ವೇಳೆ “ಬಿಟಿ ಕಾಯಿದೆ ರದ್ದಾಗಲಿ”, “ಬೋಧ್ ಗಯಾ ಬೌದ್ಧರಿಗೆ ಸೇರಿದ್ದು” ಎಂಬ ಘೋಷಣೆಗಳನ್ನು ಕೂಗುತ್ತಾ ಶಾಂತಿಯುತ ಮೆರವಣಿಗೆ ನಡೆಸಿದರು.

ಇದನ್ನೂ ಓದಿ: ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಕಾರ್ಯಕ್ರಮದಲ್ಲಿ ಬೌದ್ಧ ಉಪಾಸಕರಾದ ಡಾ. ಪ್ರೇಮ್ ಕುಮಾರ್, ಡಾ. ಶಿವಕುಮಾರ್, ಡಾ. ಜಗನ್ನಾಥ್, ಪ್ರೊ. ರುದ್ರಯ್ಯ, ಸೋಸಲೆ ಸಿದ್ದರಾಜು, ಜಯಶಂಕರ್ ಮೇಸ್ತ್ರೀ, ಶ್ರೀಮತಿ ಉಷಕ್ಕ, ಶ್ರೀಮತಿ ಪುಟ್ಟಮಣಿ, ಶ್ರೀ ಶೇಖರ್, ಶ್ರೀ ರೇವಣ್ಣ (ಕೆಎಸ್ಸಾರ್ಟಿಸಿ), ಡಾ. ಚಿಂಬಬ, ಮಹಾದೇವ್ ಕೋಟೆ, ಪ್ರತಾಪ್ ದೊರೆ, ಡಾ. ಲಕ್ಷ್ಮಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.

😀
0
😍
0
😢
0
😡
0
👍
1
👎
0

Web Add
Prajapara News Kannada