Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆಎಳೆಯ ಮನಸುಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ: ಸಿ. ಅರ್ಪಿತಾಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಆಘಾತ?ಸರ್ಕಾರಿ ನೌಕರರಿಗೆ ಸೌಲಭ್ಯಗಳು ಹೆಚ್ಚುತ್ತಿವೆ; ಆದರೆ ಸರ್ಕಾರಿ ಸಂಸ್ಥೆಗಳ ಭವಿಷ್ಯ ಏನು?ರೈತರಿಗೆ, ಜಾಗೃತಿಯೇ ಅಂತಿಮ ಗುರಾಣಿಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಒಪ್ಪಂದ ರದ್ದುಪಡಿಸಿ: ಸಿಪಿಐಎಂ ಆಗ್ರಹಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್: ಮಂಗಳೂರಿನಲ್ಲಿ FIR ದಾಖಲುಮೋದಿ ಸರ್ಕಾರದ ನೀತಿಗಳಿಂದ ಕಾರ್ಮಿಕ ವರ್ಗದ ಬದುಕು ವಿನಾಶದತ್ತ: ಸುಕುಮಾರ್ ತೊಕ್ಕೋಟು • 🔥
Advertisement

ಸುಳ್ಯ: ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಪ್ರಥಮ ಸ್ಥಾನ

ಸುಳ್ಯ: ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಪ್ರಥಮ ಸ್ಥಾನ

ಸುಳ್ಯ ; ತಾಲೂಕಿನ ಸ್ಟಾರ್ ಹಳೆಗೇಟು ಸುಳ್ಯ ಇವರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ 8ನೇ ವರ್ಷದ ಶನಿವಾರ–ಆದಿತ್ಯವಾರ ಭವ್ಯ ಕ್ರಿಕೆಟ್ ಪಂದ್ಯಾಟ ಕೂಟ ಆಯೋಜಿಸಲಾಯಿತು. ಶನಿವಾರ ನಡೆದ ಪಂದ್ಯಾಟಗಳಲ್ಲಿ ಸುಳ್ಯ ತಾಲೂಕಿನ 14 ತಂಡಗಳು ಭಾಗವಹಿಸಿದ್ದರೆ, ಆದಿತ್ಯವಾರ ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ವಿವಿಧ ತಾಲೂಕುಗಳ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಸೆಮಿಫೈನಲ್ ಪಂದ್ಯಾಟದಲ್ಲಿ ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಅಸ್ತ್ರ ಪೈಚಾರ್ ತಂಡವನ್ನು ಪರಾಭವಗೊಳಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ಮತ್ತೊಂದು ಸೆಮಿಫೈನಲ್ ಪಂದ್ಯಾಟದಲ್ಲಿ ಪುಣಚ ಹಾಗೂ ಮಾಡವು ತಂಡಗಳ ನಡುವೆ ನಡೆದ ತೀವ್ರ ಸೆಣಸಾಟದಲ್ಲಿ ಪುಣಚ ತಂಡ ಫೈನಲ್‌ಗೆ ಅರ್ಹತೆ ಗಳಿಸಿತು.
ಫೈನಲ್ ಪಂದ್ಯಾಟದಲ್ಲಿ ವಿಷ್ಣು ಕ್ರಿಕೆಟರ್ಸ್ ಮೇನಾಲ ಹಾಗೂ ಪುಣಚ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಿತು. ಉತ್ತಮ ಆಟ ಪ್ರದರ್ಶಿಸಿದ ವಿಷ್ಣು ಕ್ರಿಕೆಟರ್ಸ್ ಮೇನಾಲ ತಂಡ ಎದುರಾಳಿ ಪುಣಚ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
ಈ ಪಂದ್ಯಾಟ ಕೂಟಕ್ಕೆ ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಆಟಗಾರರಿಗೆ ಉತ್ತೇಜನ ನೀಡಿದರು. ಸಂಘಟಕರ ಪ್ರಯತ್ನವನ್ನು ಕ್ರೀಡಾಪ್ರೇಮಿಗಳು ಶ್ಲಾಘಿಸಿದರು.

😀
0
😍
0
😢
0
😡
0
👍
4
👎
0

Web Add
Prajapara News Kannada