Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಸುಳ್ಯ: AVSS ಸುಳ್ಯ ಶಾಖೆಯಿಂದ ಸ್ವಸಹಾಯ ಗುಂಪುಗಳ ರಚನೆ

ಸುಳ್ಯ: AVSS ಸುಳ್ಯ ಶಾಖೆಯಿಂದ ಸ್ವಸಹಾಯ ಗುಂಪುಗಳ ರಚನೆ

ಸುಳ್ಯ: ತಾಲೂಕಿನ ಸಂಪಾಜೆ ಗ್ರಾಮದ ಕಡೆಪಾಲದಲ್ಲಿ AVSS ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿ., ಸುಳ್ಯ ಶಾಖೆಯ ವತಿಯಿಂದ ಸ್ವಸಹಾಯ ಗುಂಪುಗಳ ರಚನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸುಳ್ಯ ಶಾಖೆಯ ಸೇವಾ ಪ್ರತಿನಿಧಿ ಆಯುಷ್ಮತಿ ಹರಿಣಾಕ್ಷಿ ಮೇಡಂ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಯ ಸ್ಥಾಪಕರಾದ ಮನೋಹರ್ ಪಿ.ಬಿ. ಪಲ್ಲತ್ತಡ್ಕ, ನಿರ್ವಹಣಾ ಸಮಿತಿ ಸದಸ್ಯರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ, ಚೋಮ ಎನ್.ಬಿ. ಗಾಂಧಿನಗರ, ಹರೀಶ ಎಂ.ಎಸ್. ಮೇನಾಲ, ಸುಂದರ ಬಿ.ಕೆ. ಸೇರಿದಂತೆ ಸ್ವಸಹಾಯ ಗುಂಪಿನ ಮೇಲ್ವಿಚಾರಕರಾದ ಪ್ರಕಾಶ್ ಪಿ.ಎಸ್. ಪಾತೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಇದಲ್ಲದೆ ಸ್ಥಳೀಯ ಪ್ರಮುಖರಾದ ಆಯುಷ್ಮತಿ ರುಕ್ಮಿಣಿ ಸಿ.ಎಚ್., ಕೃಷ್ಣಕುಮಾರ್ ಕಡೆಪಾಲ, ಯೋಗೀಶ್ ಕಡೆಪಾಲ, ಚಿನ್ನಪ್ಪ ಪೆರುಂಗೋಡಿ, ಗಿರಿಧರ್ ಕಡೆಪಾಲ, ಗೋಪತಿ ಜೊಡುಪಾಲ, ಮೋಹನ್ ಕುಮಾರ್ ಕಡೆಪಾಲ, ಚಂದ್ರಶೇಖರ ಕಡೆಪಾಲ, ಹಿಮಕರ ಕಡೆಪಾಲ, ಶಿವರಾಮ ಕಡೆಪಾಲ, ಈಶ್ವರ ಕುಮಾರ್ ಕಡೆಪಾಲ, ಸರೊಜೀನಿ ಕಡೆಪಾಲ, ಮೋಹಿನಿ ಕಡೆಪಾಲ, ಜಯಶ್ರೀ ಕಡೆಪಾಲ, ಲೀಲಾವತಿ ಕಡೆಪಾಲ, ವಸಂತಿ ಕಡೆಪಾಲ, ಸುಮಲತಾ ಕಡೆಪಾಲ, ಶೋಭಾ ಕಡೆಪಾಲ, ಸುಶೀಲಾ ಕಡೆಪಾಲ, ಭವಾನಿ ಕಡೆಪಾಲ, ಹರಪ್ರಸಾದ್ ಕಡೆಪಾಲ, ಸತೀಶ್ ಕಡೆಪಾಲ, ಬಾಲಕೃಷ್ಣ ಕಡೆಪಾಲ, ಶಿವಪ್ರಸಾದ್ ಕಡೆಪಾಲ, ಶೇಖರ್ ಕಡೆಪಾಲ, ಬಾಲಕೃಷ್ಣ ಅಡ್ಕಾರ್, ಸುಕುಮಾರ್ ಕಡೆಪಾಲ, ಜಗದೀಶ ಕಡೆಪಾಲ, ತೇಜಶ್ ಜೊಡುಪಾಲ, ದೀಪಕ್ ಜೊಡುಪಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜೈ ಭೀಮ್ ಸ್ವಸಹಾಯ ಸಂಘ, ಲಕ್ಷ್ಮೀ ಬಾಯಿ ಸ್ವಸಹಾಯ ಸಂಘ ಹಾಗೂ ಎ.ವಿ.ಎಸ್.ಎಸ್. ಸ್ವಸಹಾಯ ಸಂಘಗಳನ್ನು ಅಧಿಕೃತವಾಗಿ ರಚಿಸಲಾಯಿತು. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಉಳಿತಾಯ ಸಂಸ್ಕೃತಿ ಬೆಳೆಸುವುದು ಹಾಗೂ ಸ್ವ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಸಂಘದ ಪದಾಧಿಕಾರಿಗಳು ವಿವರಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸ್ವಸಹಾಯ ಗುಂಪುಗಳ ಮಹತ್ವ ಹಾಗೂ ಸಹಕಾರ ಸಂಘಗಳ ಪಾತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮವು ಉತ್ಸಾಹಭರಿತವಾಗಿ, ಯಶಸ್ವಿಯಾಗಿ ನಡೆಯಿತು.

😀
0
😍
0
😢
0
😡
0
👍
7
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading