ಈ ದೇಶದಲ್ಲಿ ರಾತ್ರಿ ಹೊತ್ತು ಬಸ್ಟೆಂಡ್ ನಲ್ಲಿ ಇನ್ವೆಸ್ಟಿಗೇಷನ್ ಮಾಡುವ ಕಾನೂನು ಇದೆಯಾ ? ಸ್ಥಳೀಯರ ಪ್ರಶ್ನೆ.
ಗಂಗಾವತಿ: ಗಂಗಾವತಿ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲಿಯುವ ಸಮಗಾರ ಸಮುದಾಯಕ್ಕೆ ಸೇರಿದ ಮೈನರ್ ಬಾಲಕನ ಮೇಲೆ ಕೆಲ ಪೊಲೀಸ್ ಅಧಿಕಾರಿಗಳು ನಡೆಸಿದ್ದಾರೆ ಎನ್ನಲಾದ ಅಟ್ರಾಸಿಟಿ ದೌರ್ಜನ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲಿ ಮೈನರ್ ಬಾಲಕ ನನ್ನ ಮೇಲೆ ಪೊಲೀಸ್ ಅಧಿಕಾರಿಗಳು ಅಮಾನುಷವಾಗಿ ವರ್ತಿಸುತ್ತಿದ್ದಾರೆ ಎಂದು ಬಾಲಕ ಹೇಳಿದ್ದಾನೆ, ಸ್ಥಳೀಯರು ಇದನ್ಬು ನೋಡಿದ್ದಾರೆ ಎಂದಿದ್ದಾರೆ. ಈ ಘಟನೆ ಮಾನವೀಯತೆಗೂ ಹಾಗೂ ಕಾನೂನು ಸುವ್ಯವಸ್ಥೆಯ ಮೌಲ್ಯಗಳಿಗೂ ವಿರುದ್ಧವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ರಾತ್ರಿ ಹೊತ್ತು ಬಸ್ಟೆಂಡ್ ನಲ್ಲಿ ಇನ್ವೆಸ್ಟಿಗೇಷನ್ ಮಾಡುವ ಕಾನೂನು ಇದೆಯಾ.. ಎಂದು ಸ್ಥಳೀಯರು ಪ್ರಶ್ನಿಸುವ ಜೊತೆಗೆ ಪೋಲೀಸರ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದಲ್ಲದೆ, ಗಂಗಾವತಿ ಬಸ್ ನಿಲ್ದಾಣದ ಡಿಪೋ ಕಂಟ್ರೋಲರ್ ಅವರ ನಿರ್ಲಕ್ಷ್ಯಪೂರ್ಣ ಕರ್ತವ್ಯವೂ ಈ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದ್ದು, ಅವರನ್ನೂ ಸಹ ಈ ಪ್ರಕರಣದಲ್ಲಿ ಅಮಾನತುಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಘಟನೆಯ ಕುರಿತು ಮಾತನಾಡಿದ ಕೆಲವರು, “ಪೊಲೀಸ್ ಇಲಾಖೆ ಎಂದರೆ ನಮಗೆ ಅತೀವ ಪ್ರೀತಿ ಮತ್ತು ಗೌರವ. ಆದರೆ ಇಂತಹ ಕೆಲವರ ಕಾನೂನು ಉಲ್ಲಂಘನೆ ಹಾಗೂ ದೌರ್ಜನ್ಯ ಕೃತ್ಯಗಳಿಂದ ಸಂಪೂರ್ಣ ಇಲಾಖೆಯ ಮೇಲೆಯೇ ಜನರಿಗೆ ಅಪನಂಬಿಕೆ ಮೂಡುತ್ತದೆ. ಇದು ಅತ್ಯಂತ ದುಃಖಕರ,” ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ಮೈನರ್ ಬಾಲಕನಿಗೆ ನ್ಯಾಯ ದೊರಕಿಸುವಂತೆ ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಮೇಲಧಿಕಾರಿಗಳು ಸ್ಪಷ್ಟ ಸಂದೇಶ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕೂಡಾ ಆಗ್ರಹಿಸಲಾಗಿದೆ.
😀
0
😍0
😢0
😡0
👍1
👎0
ಇದನ್ನೂ ಓದಿ:
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ