Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ದ.ಕ ಬಿಎಸ್ಪಿಯಿಂದ ಆರ್ಥಿಕ್ ಸಹಯೋಗ್ ದಿವಸ್

ದ.ಕ ಬಿಎಸ್ಪಿಯಿಂದ ಆರ್ಥಿಕ್ ಸಹಯೋಗ್ ದಿವಸ್

ದಕ್ಷಿಣ ಕನ್ಬಡ:  ಬಹುಜನ ಸಮಾಜ ಪಕ್ಷ (ಬಿಎಸ್ಪಿ) ರಾಷ್ಟ್ರೀಯ ಸಂಯೋಜಕರು ಹಾಗೂ ರಾಜ್ಯ ಉಸ್ತುವಾರಿಗಳಾದ ದಿನೇಶ್ ಗೌತಮ್ ಅವರು ಪಕ್ಷ ಬಲವರ್ಧನೆಯ ಉದ್ದೇಶದಿಂದ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಭೇಟಿ ನೀಡುತ್ತಿದ್ದಾರೆ. ಅವರ ಜಿಲ್ಲಾಭೇಟಿಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಪ್ರೀತಿಪೂರ್ವಕ ಸ್ವಾಗತವನ್ನು ಕೋರಲಾಯಿತು.

ಪ್ರತಿ ವರ್ಷದಂತೆ ಈ ಬಾರಿ ಕೂಡ ಬಿಎಸ್ಪಿಯ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ “ಆರ್ಥಿಕ ಸಹಯೋಗ್ ದಿವಸ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು, ಸಂಯೋಜಕ ನಾರಾಯಣ್ ಬೋಧ್, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಖಜಾಂಚಿ ಶಿವರಾಮ ಪೇಜಾವರ, ಮಾಜಿ ಜಿಲ್ಲಾ ಖಜಾಂಚಿ ಶಶಿಕಲಾ ಕಾವೂರು, ಬಾಂಮ್ಸೆಫ್‌ನ ಹಿರಿಯ ಮುಖಂಡ ಎಸ್.ಆರ್. ಲಕ್ಷ್ಮಣ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಲೋಕೇಶ್ ಮುತ್ತೂರು, ಬೆಳ್ತಂಗಡಿ ಉಸ್ತುವಾರಿ ಸಂಜೀವ ನೀರಾಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಬಿವಿಎಫ್ ಸಂಯೋಜಕ ನಿತಿನ್ ಮುತ್ತೂರು ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಇನ್ನು ಮುಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪೋರ್ಕೋಡಿ ಪೇಜಾವರದಲ್ಲಿ ಆರ್ಥಿಕ ಸಹಯೋಗ್ ದಿವಸ್ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು ಎಂದು ಜಿಲ್ಲಾ ಸಮಿತಿ ತಿಳಿಸಿದೆ.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading