ಪಾವಗಡ: ಸದೃಢ ಪಾವಗಡಕ್ಕಾಗಿ “ಹಳ್ಳಿಗಳ ಕಡೆ ಬಿಪಿಎಸ್ ಕಡೆಗೆ” ಅಭಿಯಾನದಡಿ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಬೂದಿ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರವಾಟಪುರ ಗ್ರಾಮಕ್ಕೆ ಭಾರತೀಯ ಪರಿವರ್ತನ ಸಂಘ (BPS) ತಂಡ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿತು.
ಈ ವೇಳೆ ಹೈಕೋರ್ಟ್ ವಕೀಲರು ಹಾಗೂ BPS ರಾಜ್ಯಾಧ್ಯಕ್ಷರಾದ ಹರಿರಾಮ್, ತುಮಕೂರು ಜಿಲ್ಲಾ ಅಧ್ಯಕ್ಷರಾದ ಹೆಚ್ ಕೆಂಚರಾಯ (ಚಿಕ್ಕತಿಮ್ಮನಹಟ್ಟಿ), ಮುಖಂಡರಾದ ಹೆಚ್ ಶಿವಕುಮಾರ್ (ನ್ಯಾಯದಗುಂಟೆ) ಮತ್ತು ಹನುಮಂತರಾಯಪ್ಪ (ಹರಿಹರಪುರ) ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.
ಗ್ರಾಮಸ್ಥರ ಹೇಳಿಕೆ ಪ್ರಕಾರ, ಸಾರವಾಟಪುರದಲ್ಲಿ ಕಳೆದ ಸುಮಾರು ಐದು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು, ಇದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ BPS ಮುಖಂಡರು ತಕ್ಷಣವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕೆಟ್ಟುಹೋಗಿರುವ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನರಸಿಂಹಯ್ಯ, ರಮೇಶ್, ತಿಪ್ಪೆರುದ್ರ, ನಟರಾಜು, ಪ್ರಭಾಕರ, ಹಂಷಣ್ಣ, ರಮೇಶ್ ಬಾಬು, ನರಸಿಂಹಪ್ಪ, ಸಂತೋಷ್ ಸೇರಿದಂತೆ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಮುಖಂಡರಾದ ಯುವರಾಜ್ ಉಪಸ್ಥಿತರಿದ್ದರು.