ಕೊಟ್ಟಿಗೆಯ ಮೌನದಲ್ಲಿ, ತಣ್ಣನೆಯ ರಾತ್ರಿಯಲ್ಲಿ, ಲೋಕದ ಭಾರ ಹೊತ್ತ ಶಿಶುವೊಂದು ಹುಟ್ಟಿತು…ಅವನ ಬಳಿ ಸಿಂಹಾಸನವಿರಲಿಲ್ಲ, ಕಿರೀಟವಿರಲಿಲ್ಲ; ಆದರೆ ಪ್ರೀತಿಯೇ ಅವನ ಶಕ್ತಿ, ಕ್ಷಮೆಯೇ ಅವನ ಆಯುಧ. ಅವನೇ ಯೇಸು ಕ್ರಿಸ್ತ.
ಕ್ರಿಸ್ಮಸ್ ಕೇವಲ ಹಬ್ಬವಲ್ಲ; ಅದು ಹೃದಯಗಳನ್ನು ಒಂದಾಗಿಸುವ ಪ್ರಾರ್ಥನೆ. ಬಡವರ ನಡುವೆ ಜನಿಸಿದ ಯೇಸು,
“ಎಲ್ಲರೂ ಸಮಾನರು, ಪ್ರೀತಿಯೇ ದೇವರು”ಎಂಬ ಅಮರ ಸಂದೇಶವನ್ನು ಜಗತ್ತಿಗೆ ಕೊಟ್ಟನು.
ಬೆತ್ಲೆಹೆಮ್ನ ಆ ಕೊಟ್ಟಿಗೆಯಲ್ಲಿ ಹುಟ್ಟಿದ ಶಿಶು,ಇಡೀ ಮಾನವಕುಲಕ್ಕೆ ಆಶೆಯ ನಕ್ಷತ್ರವಾಗಿ ಹೊಳೆಯಿತು.ಹಸಿವಿನಿಂದ ನರಳುವವನ ಕಣ್ಣೀರಲ್ಲಿ, ಅನಾಥನ ನೋವಿನಲ್ಲಿ,
ಅವನು ತನ್ನದೇ ಪ್ರತಿಬಿಂಬವನ್ನು ಕಂಡನು.
ಕ್ರಿಸ್ಮಸ್ ದಿನ ನಕ್ಷತ್ರಗಳು ಕಂಗೊಳಿಸುತ್ತವೆ,ಮನೆಮನೆಗಳಲ್ಲಿ ದೀಪಗಳು ಬೆಳಗುತ್ತವೆ,ಆದರೆ ಯೇಸು ಬಯಸಿದ್ದು ಹೃದಯಗಳೊಳಗಿನ ಕತ್ತಲನ್ನು ದೂರ ಮಾಡುವ ಬೆಳಕು.
ಅವನ ಉಪದೇಶಗಳು ಸರಳವಾಗಿದ್ದರೂ ಶಾಶ್ವತ: ಶತ್ರುವನ್ನೂ ಕ್ಷಮಿಸು, ನಿನ್ನ ಪಕ್ಕದವನ ನೋವನ್ನು ಅರಿತುಕೋ,ಹಿಂಸೆಗೆ ಪ್ರತಿಯಾಗಿ ಶಾಂತಿಯನ್ನು ಆಯ್ಕೆಮಾಡು.ಇಂದಿನ ಅಶಾಂತ ಲೋಕಕ್ಕೆ ಯೇಸು ಕ್ರಿಸ್ತರ ಈ ಸಂದೇಶಇನ್ನಷ್ಟು ಅಗತ್ಯವಾಗಿದೆ.
ದ್ವೇಷದ ನಡುವೆ ಪ್ರೀತಿ, ವೈಷಮ್ಯದ ನಡುವೆ ಸಹೋದರತ್ವ,
ಭಯದ ನಡುವೆ ನಂಬಿಕೆ—ಇವೇ ಕ್ರಿಸ್ಮಸ್ನ ನಿಜವಾದ ಉಡುಗೊರೆಗಳು.
ಈ ಕ್ರಿಸ್ಮಸ್ ನಮ್ಮೊಳಗಿನ ಮಾನವೀಯತೆಯನ್ನು ಎಚ್ಚರಿಸಲಿ.
ಒಬ್ಬರ ನೋವಿಗೆ ಒಬ್ಬರು ಆಸರೆಯಾಗೋಣ.ಅದೇ ಯೇಸು ಕ್ರಿಸ್ತರಿಗೆ ನೀಡುವ ನಿಜವಾದ ಗೌರವ.
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು