Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ಕಲ್ಯಾಣದ ಹೆಸರಿನಲ್ಲಿ ‘ಬಿಡಿಗಾಸಿನ’ ಭಾಗ್ಯ: ದಲಿತರಿಗೆ ಸಾಲದ ಶೂಲ, ಮೇಲ್ವರ್ಗಕ್ಕೆ ಬಂಡವಾಳದ ಏಣಿ!

ಕಲ್ಯಾಣದ ಹೆಸರಿನಲ್ಲಿ ‘ಬಿಡಿಗಾಸಿನ’ ಭಾಗ್ಯ: ದಲಿತರಿಗೆ ಸಾಲದ ಶೂಲ, ಮೇಲ್ವರ್ಗಕ್ಕೆ ಬಂಡವಾಳದ ಏಣಿ!

Disclaimer: ಇದು ಆಡಳಿತ ನಡೆಸುವ ಎಲ್ಲಾ ಪಕ್ಷಗಳ ಸರ್ಕಾರಗಳಿಗೂ ಅನ್ವಯ.

ಒಂದು ಸರ್ಕಾರಿ ಕಚೇರಿಯ ಮುಂದೆ ರಾರಾಜಿಸುವ ಬೃಹತ್ ಬೋರ್ಡುಗಳು, ಅದರಲ್ಲಿ ನಗುತ್ತಿರುವ ಜನಪ್ರತಿನಿಧಿಗಳ ಫೋಟೋಗಳು ಮತ್ತು ಅದರ ಕೆಳಗೆ ಪಟ್ಟಿ ಮಾಡಲಾದ ಹತ್ತಾರು ಯೋಜನೆಗಳು. ಮೇಲ್ನೋಟಕ್ಕೆ ಇದು ಪರಿಶಿಷ್ಟ ಜಾತಿಯ (SC) ಸಮುದಾಯದ ಏಳಿಗೆಗಾಗಿ ಸರ್ಕಾರ ಶ್ರಮಿಸುತ್ತಿದೆ ಎನಿಸಿದರೂ, ಆಳವಾಗಿ ಗಮನಿಸಿದಾಗ ಇವೆಲ್ಲವೂ ದಮನಿತ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ಬದಲು, ಅವರನ್ನು ‘ಅಲ್ಪತೃಪ್ತ’ರನ್ನಾಗಿ ಮಾಡಿ, ಸಣ್ಣಪುಟ್ಟ ಸಾಲದ ಸುಳಿಯಲ್ಲಿ ಸಿಲುಕಿಸುವ ತಂತ್ರಗಾರಿಕೆಯಂತೆ ಗೋಚರಿಸುತ್ತದೆ.

ಈ ಚಿತ್ರದಲ್ಲಿರುವ ‘ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ’ದ ಯೋಜನೆಗಳನ್ನು ವಿಶ್ಲೇಷಿಸಿದಾಗ ಮತ್ತು ಇವುಗಳನ್ನು ಸಮಾಜದ ಮೇಲ್ವರ್ಗದ/ಬಲಾಢ್ಯರ ಪರವಾಗಿರುವ ಬೃಹತ್ ಯೋಜನೆಗಳೊಂದಿಗೆ ತಾಳೆ ಹಾಕಿದಾಗ ಸಿಗುವ ಚಿತ್ರಣ ಕರಾಳವಾಗಿದೆ.

ಸಣ್ಣತನದ ಯೋಜನೆಗಳು ಮತ್ತು ಯಾಮಾರಿಸುವ ತಂತ್ರ
ಈ ಬೋರ್ಡಿನಲ್ಲಿರುವ ಯೋಜನೆಗಳ ಸ್ವರೂಪವನ್ನು ಗಮನಿಸಿ: ‘ಸ್ವಯಂ ಉದ್ಯೋಗ’, ‘ಮೈಕ್ರೋ ಕ್ರೆಡಿಟ್’, ‘ಗಂಗಾ ಕಲ್ಯಾಣ’ ಇತ್ಯಾದಿ.

ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ

ಆಟೋ/ಟ್ಯಾಕ್ಸಿ ಓಡಿಸುವ ಮಾಲೀಕತ್ವ: ಸ್ವಯಂ ಉದ್ಯೋಗ ಯೋಜನೆಯಡಿ ಟ್ಯಾಕ್ಸಿ ಅಥವಾ ಗೂಡ್ಸ್ ವಾಹನ ಖರೀದಿಸಲು ಸಹಾಯಧನ ನೀಡಲಾಗುತ್ತದೆ (ಘಟಕ ವೆಚ್ಚ 4 ಲಕ್ಷ, ಸಹಾಯಧನ 2 ಲಕ್ಷ). ಇದರ ಅರ್ಥವಿಷ್ಟೇ – ದಲಿತ ಯುವಕರು ಡ್ರೈವರ್‌ಗಳಾಗಿಯೇ ಉಳಿಯಬೇಕು. ಅವರಿಗೆ ವಾಹನ ಸಿಗುತ್ತದೆಯೇ ಹೊರತು, ಟ್ರಾನ್ಸ್‌ಪೋರ್ಟ್ ಕಂಪನಿ ಕಟ್ಟುವ ಬಂಡವಾಳ ಸಿಗುವುದಿಲ್ಲ. ಇದು ಅವರನ್ನು ದಿನಗೂಲಿ ದುಡಿಮೆಯ ಚಕ್ರದಲ್ಲೇ ಇರಿಸುವ ಹುನ್ನಾರ.

ಚಿಲ್ಲರೆ ಅಂಗಡಿಗಳ ‘ಮೈಕ್ರೋ’ ಬಲೆ: ಕಿರುಸಾಲ ಯೋಜನೆಯಡಿ (Micro Finance) ಸಿಗುವುದು ಕೇವಲ 1 ರಿಂದ 2.5 ಲಕ್ಷ ರೂಪಾಯಿ. ಇಂದಿನ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿಯಲ್ಲಿ ಯಾವ ಉದ್ದಿಮೆ ಸ್ಥಾಪಿಸಲು ಸಾಧ್ಯ? ಕೇವಲ ಟೀ ಅಂಗಡಿ, ತರಕಾರಿ ಗಾಡಿ ಅಥವಾ ಇಸ್ತ್ರಿ ಪೆಟ್ಟಿಗೆಯಂತಹ ಅತೀ ಸಣ್ಣ ವ್ಯಾಪಾರವನ್ನಷ್ಟೇ ಮಾಡಲು ಸಾಧ್ಯ. ಇದು ದಲಿತರನ್ನು ‘ಬೀದಿ ಬದಿಯ ವ್ಯಾಪಾರಿ’ಗಳನ್ನಾಗಿ ಸೀಮಿತಗೊಳಿಸುತ್ತದೆಯೇ ಹೊರತು, ಅವರನ್ನು ‘ಉದ್ಯಮಿ’ಗಳನ್ನಾಗಿ ಮಾಡುವುದಿಲ್ಲ.

ಸಾಲದ ಹೊರೆ: ಇಲ್ಲಿ ಸಿಗುವ ಸಹಾಯಧನವನ್ನು (Subsidy) ದೊಡ್ಡದಾಗಿ ಬಿಂಬಿಸಲಾಗುತ್ತದೆ. ಆದರೆ ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಆದಾಯವೇ ಸರಿಯಾಗಿ ಬಾರದ ಸಣ್ಣಪುಟ್ಟ ವ್ಯಾಪಾರ ಮಾಡಿ, ಬ್ಯಾಂಕಿನ ಬಡ್ಡಿ ಕಟ್ಟಿ, ಕೊನೆಗೆ ಅಸಲೂ ತೀರಿಸಲಾಗದೆ ಎಷ್ಟೋ ಜನ ಸುಸ್ತಿದಾರರಾಗುತ್ತಾರೆ. ಸರ್ಕಾರ ಕೈತೊಳಿದುಕೊಳ್ಳುತ್ತದೆ, ಆದರೆ ಫಲಾನುಭವಿ ಸಾಲದ ಶೂಲಕ್ಕೆ ಏರುತ್ತಾನೆ.

ಮೇಲ್ವರ್ಗ ಮತ್ತು ಬಲಾಢ್ಯರಿಗೆ ಸಿಗುವ ‘ಬೃಹತ್’ ಭಾಗ್ಯಗಳು
ಈಗ ಇದೇ ಸರ್ಕಾರಿ ವ್ಯವಸ್ಥೆ ಬಲಾಢ್ಯ ಸಮುದಾಯಗಳಿಗೆ ಅಥವಾ ಕಾರ್ಪೊರೇಟ್ ವಲಯಕ್ಕೆ ನೀಡುವ ಸವಲತ್ತುಗಳನ್ನು ಗಮನಿಸಿ. ಅಲ್ಲಿ ‘ಮೈಕ್ರೋ’ ಎಂಬ ಪದವೇ ಇರುವುದಿಲ್ಲ.

ಇದನ್ನೂ ಓದಿ: ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ

ಕೈಗಾರಿಕಾ ನಿವೇಶನಗಳು: ಬಲಾಢ್ಯ ಉದ್ಯಮಿಗಳಿಗೆ ಸರ್ಕಾರವು ಎಕರೆಗಟ್ಟಲೆ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಲೀಸ್‌ಗೆ ನೀಡುತ್ತದೆ. ಆದರೆ ಆದಿಜಾಂಬವ ನಿಗಮದಲ್ಲಿ ಭೂ ಒಡೆತನ ಯೋಜನೆಗೆ ಹತ್ತಾರು ಷರತ್ತುಗಳಿರುತ್ತವೆ ಮತ್ತು ಸಿಗುವ ಭೂಮಿ ಕೇವಲ 1-2 ಎಕರೆ (ಅದೂ ಒಣಭೂಮಿಯಾಗಿದ್ದರೆ ಬೆಲೆ ಇಲ್ಲ).

ಸಾಲ ಮನ್ನಾ ಮತ್ತು ಪ್ರೋತ್ಸಾಹಧನ: ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸುವವರಿಗೆ ಕೋಟ್ಯಂತರ ರೂಪಾಯಿ ತೆರಿಗೆ ವಿನಾಯಿತಿ (Tax Holiday) ಸಿಗುತ್ತದೆ. ಬ್ಯಾಂಕುಗಳು ಕಾರ್ಪೊರೇಟ್ ಕುಳಗಳ ಸಾವಿರಾರು ಕೋಟಿ ಸಾಲವನ್ನು ‘NPA’ (ವಸೂಲಾಗದ ಸಾಲ) ಎಂದು ಮನ್ನಾ ಮಾಡುತ್ತವೆ ಅಥವಾ ಲೆಕ್ಕಪತ್ರದಿಂದ ಅಳಿಸಿ ಹಾಕುತ್ತವೆ. ಆದರೆ ದಲಿತನೊಬ್ಬ ಆಟೋ ಸಾಲದ ಕಂತು ಕಟ್ಟದಿದ್ದರೆ ಬ್ಯಾಂಕ್ ಏಜೆಂಟರು ಮನೆಗೆ ಬಂದು ಜಪ್ತಿ ಮಾಡುತ್ತಾರೆ.

ಸ್ಟಾರ್ಟ್-ಅಪ್ (Start-up) ಫಂಡ್: ಮೇಲ್ವರ್ಗದ ಯುವಕರು ಹೆಚ್ಚಿರುವ ಐಟಿ/ಬಿಟಿ ವಲಯದ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿಗಳ ವೆಂಚರ್ ಕ್ಯಾಪಿಟಲ್ (Venture Capital) ಫಂಡ್ ನೀಡುತ್ತದೆ. ಅಲ್ಲಿ ಯಾವುದೇ ಆಸ್ತಿ ಅಡಮಾನವಿರುವುದಿಲ್ಲ. ಆದರೆ ಇಲ್ಲಿ ಬಡವನಿಗೆ 50 ಸಾವಿರ ಸಾಲ ಬೇಕೆಂದರೆ ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಜಾಮೀನುದಾರರು ಎಲ್ಲರೂ ಬೇಕು.

ಅಭಿವೃದ್ಧಿ’ಯ ಹೆಸರಿನಲ್ಲಿ ಕಣ್ಣೊರೆಸುವ ತಂತ್ರ
ಈ ಬೋರ್ಡ್‌ನಲ್ಲಿರುವ ಯೋಜನೆಗಳು ದಲಿತರನ್ನು ಕೇವಲ ‘ಜೀವನಾಧಾರ’ (Subsistence) ಮಟ್ಟದಲ್ಲಿ ಬದುಕಲು ಮಾತ್ರ ಸಹಾಯ ಮಾಡುತ್ತವೆ, ಆದರೆ ಅವರನ್ನು ‘ಶ್ರೀಮಂತ’ರನ್ನಾಗಿ (Wealth Creation) ಮಾಡುವುದಿಲ್ಲ.

ಇದನ್ನೂ ಓದಿ: ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು

ಶಿಕ್ಷಣ ಮತ್ತು ಅಧಿಕಾರದಿಂದ ದೂರ: ನಿಜವಾದ ಅಭಿವೃದ್ಧಿ ಇರುವುದು ಉನ್ನತ ಶಿಕ್ಷಣ, ಭೂಮಿಯ ಮೇಲಿನ ಹಕ್ಕು ಮತ್ತು ದೊಡ್ಡ ಮಟ್ಟದ ಕೈಗಾರಿಕಾ ಮಾಲೀಕತ್ವದಲ್ಲಿ. ಆದರೆ ಸರ್ಕಾರ ಇಂತಹ ಸಣ್ಣಪುಟ್ಟ ಸಾಲಗಳನ್ನು ಕೊಟ್ಟು, “ನೋಡಿ ನಿಮಗಾಗಿ ಎಷ್ಟೊಂದು ಯೋಜನೆ ತಂದಿದ್ದೇವೆ” ಎಂದು ಪ್ರಚಾರ ಪಡೆಯುತ್ತದೆ.

ಅನುಷ್ಠಾನದ ಅಣಕ: ಬೋರ್ಡ್‌ನಲ್ಲಿ ಬರೆದಿರುವ ಯೋಜನೆಗಳ ಲಾಭ ಪಡೆಯಲು ಫಲಾನುಭವಿ ಅಲೆದಾಡಬೇಕು. ಮಧ್ಯವರ್ತಿಗಳ ಹಾವಳಿ, ಲಂಚಗುಳಿತನ ದಾಟಿ ಕೈಗೆ ದುಡ್ಡು ಸಿಗುವಷ್ಟರಲ್ಲಿ ಅರ್ಧ ಆಯಸ್ಸು ಕಳೆದಿರುತ್ತದೆ. ಅದೇ ಮೇಲ್ವರ್ಗದ ಪ್ರಭಾವಿಗಳಿಗೆ ಲೋನ್ ಕಡತಗಳು ಮನೆ ಬಾಗಿಲಿಗೆ ಬಂದು ಸಹಿ ಪಡೆಯುತ್ತವೆ.

ಒಟ್ಟಾರೆಯಾಗಿ, ಈ ಬ್ಯಾನರ್‌ನಲ್ಲಿರುವ ಯೋಜನೆಗಳು ದಲಿತ ಸಮುದಾಯವನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವ ಯೋಜನೆಗಳಲ್ಲ. ಬದಲಾಗಿ, ಅವರನ್ನು ವ್ಯವಸ್ಥೆಯ ಅಂಚಿನಲ್ಲೇ ಇರಿಸಿಕೊಂಡು, “ನಿಮಗೂ ಏನೋ ಕೊಟ್ಟಿದ್ದೇವೆ” ಎಂದು ಸಮಾಧಾನಪಡಿಸುವ ‘ಲಾಲಿಪಾಪ್’ ಗಳಂತಿವೆಯೇ ಹೊರತು, ಸಮಾಜದ ಅಸಮಾನತೆಯನ್ನು ಹೋಗಲಾಡಿಸುವ ಕ್ರಾಂತಿಕಾರಿ ಹೆಜ್ಜೆಗಳಲ್ಲ. ನಿಜವಾದ ನ್ಯಾಯ ಬೇಕೆಂದರೆ, ದಲಿತರಿಗೆ ಬೇಕಿರುವುದು ‘ಸಾಲ’ವಲ್ಲ, ‘ಸಂಪನ್ಮೂಲಗಳಲ್ಲಿ ಪಾಲು’.
-ವಿ.ಆರ್.ಸಿ.

😀
0
😍
0
😢
0
😡
0
👍
2
👎
0

Web Add
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
Prajapara News Kannada