ಮಂಗಳೂರು(ಪೇಜಾವರ): ಡಿಸೆಂಬರ್ 30, 2025 ರಂದು ಸಂಜೆ ಪೇಜಾವರದ ಅಂಬೇಡ್ಕರ್ ಭವನದಲ್ಲಿ ಧರ್ಮಬೋಧನೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡ ಧಮ್ಮದೀಪ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀಲಂಕಾದ ಪೂಜ್ಯ ಸಂಘಾನಂದ ಮಹಾಥೇರೋ ಭಂತೇಜಿ ಹಾಗೂ ಬೀದರ್ನ ಪೂಜ್ಯ ಸಂಘಪಾಲ ಭಂತೇಜಿ ಅವರು ಉಪಸ್ಥಿತರಿದ್ದು, ಬೌದ್ಧ ಧರ್ಮದ ಮೂಲ ಮೌಲ್ಯಗಳಾದ ಶಾಂತಿ, ಅಹಿಂಸೆ, ಸೌಹಾರ್ದತೆ ಮತ್ತು ಮಾನವೀಯತೆ ಕುರಿತು ಸಂದೇಶ ನೀಡಿದರು. ಸಮಾಜದಲ್ಲಿ ಸದುದ್ದೇಶ, ಸತ್ಯಮಾರ್ಗ ಮತ್ತು ಸಮಾನತೆಯ ಚಿಂತನೆ ಬೆಳೆಸುವ ಅಗತ್ಯವಿದೆ ಎಂದು ಅವರು ತಮ್ಮ ಉಪದೇಶದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಹೊಸ ವರ್ಷದ ಅಂಗವಾಗಿ 2026ರ ಕ್ಯಾಲೆಂಡರ್ನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಒಳಗೊಂಡ ಕ್ಯಾಲೆಂಡರ್ಗೆ ಭಾಗವಹಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ಬೌದ್ಧ ಅನುಯಾಯಿಗಳು, ಸಮಾಜಮುಖಿ ಕಾರ್ಯಕರ್ತರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಧಮ್ಮದೀಪ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.