Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಮಂಗಳೂರು: ಐವನ್‌ ಡಿʼಸೋಜಾ ಶಿಫಾರಸ್ಸು: 9 ಮಂದಿಗೆ ರೂ.4.44 ಲಕ್ಷ

ಮಂಗಳೂರು: ಐವನ್‌ ಡಿʼಸೋಜಾ ಶಿಫಾರಸ್ಸು: 9 ಮಂದಿಗೆ ರೂ.4.44 ಲಕ್ಷ

ಮಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು ರೂ.4,44,025/- (ರೂಪಾಯಿ ನಾಲ್ಕು ಲಕ್ಷ ನಲವತ್ತಾಲ್ಕು ಸಾವಿರದ ಇಪ್ಪತ್ತೈದು) ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದೆ.

ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿʼಸೋಜಾ ಅವರ ಶಿಫಾರಸ್ಸಿನ ಮೇರೆಗೆ ಈ ಪರಿಹಾರ ಧನವನ್ನು ಮಂಜೂರು ಮಾಡಲಾಗಿದ್ದು, 9 ಮಂದಿ ಅರ್ಜಿದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

ಪರಿಹಾರ ಧನ ಪಡೆದವರ ವಿವರ ಹೀಗಿದೆ:
ಶ್ರೀ ನಾರಾಯಣ ಕುಲಶೇಖರ ಅವರಿಗೆ ರೂ.1,17,434/-, ಶ್ರೀ ನಿಶ್ಚಲ್ (ಮಂಗಳೂರು) ಅವರಿಗೆ ರೂ.1,10,000/-, ಶ್ರೀ ಎಂ. ಅಬ್ದುಲ್‌ ಖಾದರ್‌ (ಮಂಗಳೂರು) ಅವರಿಗೆ ರೂ.59,066/-, ಶ್ರೀ ಇಬ್ರಾಹಿಂ (ಸಜಿಪನಡು) ಅವರಿಗೆ ರೂ.45,000/-, ಶ್ರೀ ಉಸ್ಮಾನ್‌ (ಮೂಡಬಿದ್ರಿ) ಅವರಿಗೆ ರೂ.41,021/-, ಶ್ರೀ ಎಂ. ಅಬುಬಕ್ಕರ್‌ ಅವರಿಗೆ ರೂ.22,041/-, ಶ್ರೀ ಅಬ್ದುಲ್‌ ರಜಾಕ್‌ (ಕುದ್ರೋಳಿ) ಅವರಿಗೆ ರೂ.18,476/-, ಶ್ರೀ ಲಾರೆನ್ಸ್‌ ಲೋಬೋ (ಜೆಪ್ಪಿನಮೊಗರು) ಅವರಿಗೆ ರೂ.17,987/-, ಶ್ರೀ ಅಹಮ್ಮದ್‌ ಬಾವಾ (ಅಡ್ಡೂರು) ಅವರಿಗೆ ರೂ.13,000/- ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ.

ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಯ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾ ಅವರ ಕಚೇರಿಯಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮೊಹಮ್ಮದ್ ಅಶ್ರಫ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ಮಾಜಿ ಕಾರ್ಪೋರೇಟರ್ ಅಪ್ಪಿ ಲತಾ, ನಾಗೇಂದ್ರ ಕುಮಾರ್, ಬಾಸ್ಕರ್ ರಾವ್, ಸತೀಶ್ ಪೆಂಗಲ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ಮನುರಾಜ್ ಎನ್.ಪಿ, ಇಮ್ರಾನ್, ನೀತು ಡಿಸೋಜಾ, ಪ್ರವೀಣ್ ಜೇಮ್ಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading