Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಸುಳ್ಯದಲ್ಲೇ ಬೀಡು ಬಿಟ್ಟ ಆನೆ; ಮಾರ್ಕಜ–ಆರಂತೋಡು ರಸ್ತೆಯಲ್ಲಿ ರಾತ್ರಿ ಸಂಚಾರ; ಎಚ್ಚರಿಕೆ

ಸುಳ್ಯದಲ್ಲೇ ಬೀಡು ಬಿಟ್ಟ ಆನೆ; ಮಾರ್ಕಜ–ಆರಂತೋಡು ರಸ್ತೆಯಲ್ಲಿ ರಾತ್ರಿ ಸಂಚಾರ; ಎಚ್ಚರಿಕೆ

ಸುಳ್ಯ: ಸುಳ್ಯ ತಾಲೂಕಿನ ವ್ಯಾಪ್ತಿಯನ್ನು ಬಿಟ್ಟು ಹೋಗದೇ ಅಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ. ಕಳೆದ ಕೆಲವು ದಿನಗಳಿಂದ ಸುಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆಗಳ ಸಂಚಾರ ಹೆಚ್ಚಾಗಿದ್ದು, ವಿಶೇಷವಾಗಿ ಮಾರ್ಕಜ–ಆರಂತೋಡು ರಸ್ತೆ ಮಾರ್ಗದಲ್ಲಿ ರಾತ್ರಿ ವೇಳೆ ದಿನನಿತ್ಯ ಆನೆಗಳು ಓಡಾಡುತ್ತಿರುವುದು ಕಂಡುಬಂದಿದೆ.

ಸ್ಥಳೀಯರ ಮಾಹಿತಿಯಂತೆ, ಆಹಾರ ಹಾಗೂ ನೀರಿನ ಹುಡುಕಾಟಕ್ಕಾಗಿ ಆನೆಗಳು ಮಾನವ ವಾಸದ ಪ್ರದೇಶಗಳತ್ತ ಬರುತ್ತಿದ್ದು, ಈ ಪ್ರದೇಶವನ್ನು ಶಾಶ್ವತ ಸಂಚಾರ ಮಾರ್ಗವಾಗಿ ಬಳಸುತ್ತಿರುವ ಸಾಧ್ಯತೆ ಇದೆ. ಇದರಿಂದ ರಾತ್ರಿ ವೇಳೆಯ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅಪಾಯ ಎದುರಾಗುತ್ತಿದೆ. ಆನೆಗಳು ರಸ್ತೆ ದಾಟುವ ವೇಳೆ ಅಚಾನಕ್ ಎದುರಾದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದುರಿಂದ, ರಾತ್ರಿ ಸಮಯದಲ್ಲಿ ಸಂಚರಿಸುವವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನಲಾಗುತ್ತಿದೆ.

😀
0
😍
0
😢
0
😡
0
👍
1
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading