ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ, ಸುಳ್ಯ ಶಾಖೆಯ ವತಿಯಿಂದ ಮಂಡೆಕೋಲು ಗ್ರಾಮ ಹಾಗೂ ಗುತ್ತಿಗಾರು ಗ್ರಾಮದ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘಗಳನ್ನು ಇಂದು ರಚಿಸಲಾಯಿತು.
ಈ ಸಂದರ್ಭದಲ್ಲಿ AVSS ಶಾಖೆಯ ಕಾರ್ಯಚಟುವಟಿಕೆಗಳು ಹಾಗೂ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಕುರಿತು ಶಾಖೆಯ ನಿರ್ವಹಣಾ ಸಮಿತಿ ಸದಸ್ಯರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ ಮಾಹಿತಿ ನೀಡಿದರು.
ಸ್ವಸಹಾಯ ಸಂಘಗಳ ಉಳಿತಾಯದ ಮಹತ್ವ ಹಾಗೂ ಸಾಲ ಸೌಲಭ್ಯಗಳನ್ನು ಸಮರ್ಥವಾಗಿ ಬಳಸುವ ಕುರಿತು ಸ್ವಸಹಾಯ ಸಂಘದ ಮೇಲ್ವಿಚಾರಕರಾದ ಪ್ರಕಾಶ್ ಪಾತೆಟ್ಟಿ ವಿವರಿಸಿದರು.
ವೇದಿಕೆಯಲ್ಲಿ ಚೋಮ ಗಾಂಧಿನಗರದ ಸತೀಶ್ ಬೂಡುಮಕ್ಕಿ ಉಪಸ್ಥಿತರಿದ್ದರು.
ಈ ವೇಳೆ ಕೆಳಕಂಡ ನೂತನ ಸ್ವಸಹಾಯ ಸಂಘಗಳಿಗೆ ಹೆಸರು ನೀಡಲಾಯಿತು:
ಸಿದ್ದಾರ್ಥ ಸ್ವಸಹಾಯ ಸಂಘ – ಚೇರದಮೂಲೆ, ಮಂಡೆಕೋಲು
ಶ್ರೀ ಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ – ಚೇರದಮೂಲೆ, ಮಂಡೆಕೋಲು
ಕೋಟೆದ ಅರಸು ಮಹಿಳಾ ಸ್ವಸಹಾಯ ಸಂಘ – ಆಚಳ್ಳಿ, ಗುತ್ತಿಗಾರು
ಭೀಮ್ ಸಾಹೇಬ್ ಸ್ವಸಹಾಯ ಸಂಘ – ಆಚಳ್ಳಿ, ಗುತ್ತಿಗಾರು
ಕಾರ್ಯಕ್ರಮಕ್ಕೆ AVSS ಸೇವಾಪ್ರತಿನಿಧಿ ಚಂದ್ರಾವತಿ ಅವರು ಸಹಕಾರ ನೀಡಿದರು. ಸುಂದರ್ ಕೂತ್ಕುಂಜ ಕಾರ್ಯಕ್ರಮ ನಿರೂಪಿಸಿದರು.