ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ನಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸುತ್ತಿದೆ.
1 ನೇ ತರಗತಿಯಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ( ಮೊಬೈಲ್ ನಲ್ಲಿ ವಿಡಿಯೋ ರೆಕಾಡ್೯ ಮಾಡಿ ಕಳುಹಿಸುವುದು. ಹಾಡಿನ ಅವಧಿ ಗರಿಷ್ಟ 5 ನಿಮಿಷ)
5 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆಗಳು ವಿಷಯದ ಮೇಲೆ ಭಾಷಣ ಸ್ಪರ್ಧೆ (ಮೊಬೈಲ್ ನಲ್ಲಿ ವಿಡಿಯೋ ಮಾಡಿ ಕಳುಹಿಸುವುದು. ಅವಧಿ ಗರಿಷ್ಟ 8 ನಿಮಿಷ)
8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ , ವಿಷಯ: ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಪಾತ್ರ ( A4 ಪೇಪರ್ ನಲ್ಲಿ ಬರೆದು ಮೊಬೈಲ್ ನಲ್ಲಿ ಪೋಟೋ ತೆಗೆದು ಪಿ.ಡಿ.ಎಫ್ ಮಾಡಿ ಕಳುಹಿಸತಕ್ಕದ್ದು. ಕನಿಷ್ಟ 2 ಪುಟಗಳು ಗರಿಷ್ಟ 6 ಪುಟಗಳು)
10ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ , ವಿಷಯ: ಸಂವಿಧಾನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ( A4 ಪೇಪರ್ ನಲ್ಲಿ ಬರೆದು ಮೊಬೈಲ್ ನಲ್ಲಿ ಪೋಟೋ ತೆಗೆದು ಪಿ.ಡಿ.ಎಫ್ ಮಾಡಿ ಕಳುಹಿಸತಕ್ಕದ್ದು. ಕನಿಷ್ಟ 2 ಪುಟಗಳು ಗರಿಷ್ಟ 6 ಪುಟಗಳು)
ಈ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ನೀಡಲಾಗುವುದು. ಬಹುಮಾನವು ನಗದು ಹಾಗೂ ಸತ್ಯ ಶೋಧಕ ಟ್ರೋಫಿಯನ್ನು ಒಳಗೊಂಡಿರುತ್ತದೆ. ವಿಜೇತರಾದವರಿಗೆ ದಿನಾಂಕ 18-1-2026 ನೇ ಭಾನುವಾರ ಗುರುವಾಯನಕೆರೆಯ ಸತ್ಯ ಶೋಧಕ ವೇದಿಕೆಯ ಕಛೇರಿಯಲ್ಲಿ ಬಹುಮಾನಗಳನ್ನು ನೀಡಲಾಗುವುದು.
ಎಲ್ಲಾ ಸ್ಪರ್ಧಿಗಳು ವಿಡಿಯೋ, ಪೋಟೋ ಗಳನ್ನು 31-12-2025 ಈ ದಿನಾಂಕದೊಳಗೆ ದೂರವಾಣಿ ಸಂಖ್ಯೆ: 9740768832, 9902621682, 9972245216 ಗೆ ಕಳುಹಿಸ ಬೇಕಾಗಿ ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ತಿಳಿಸಿದೆ.