Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಎಂ.ಜಿ. ಹೆಗಡೆ ಅವರಿಗೆ ಗಾಂಧಿ ಸಾಹಿತ್ಯ ಪ್ರಶಸ್ತಿ

ಎಂ.ಜಿ. ಹೆಗಡೆ ಅವರಿಗೆ ಗಾಂಧಿ ಸಾಹಿತ್ಯ ಪ್ರಶಸ್ತಿ

ಬೆಂಗಳೂರು: ಮಹಾತ್ಮ ಗಾಂಧಿಯವರ ಸ್ಮರಣಾರ್ಥವಾಗಿ ಬೆಂಗಳೂರಿನ ಗಾಂಧಿ ದತ್ತಿ ನಿಧಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಗಾಂಧಿ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಎಂ. ಜಿ. ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.

ಸಾಹಿತ್ಯ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಗುರುತಿಸಿ, ಮಿನುಗುನೋಟ ಎಂಬ ಕೃತಿಗೆ ಈ ಗೌರವ ಲಭಿಸಿದೆ. ಗಾಂಧೀಯ ಚಿಂತನೆ, ಸಾಮಾಜಿಕ ಸಂವೇದನೆ ಹಾಗೂ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬಲಪಡಿಸಿದ ಬರವಣಿಗೆಯಾಗಿ ಮಿನುಗುನೋಟ ಕೃತಿ ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನ್ಯ ಸಚಿವರಾದ ಎಚ್. ಕೆ. ಪಾಟೀಲ್, ಹಿರಿಯ ಸಾಹಿತಿ ನಾಡೋಜ ಹಂಪನಾ, ಡಾ. ವೂಡೇ ಕೃಷ್ಣ, ನರೇಂದ್ರ ಎಂ. ಸಿ., ಜಿ. ಬಿ. ಶಿವರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದೆಂದು ತಿಳಿಸಿದರು. ಎಂ.ಜಿ. ಹೆಗಡೆ ಅವರ ಬರವಣಿಗೆ ಸಮಾಜದಲ್ಲಿ ಚಿಂತನೆಗೆ ದಿಕ್ಕು ನೀಡುವ ಶಕ್ತಿಯುಳ್ಳದ್ದು ಎಂದು ಪ್ರಶಂಸಿಸಿದರು.

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಗಾಂಧಿ ಸಾಹಿತ್ಯ ಪ್ರಶಸ್ತಿ ಲಭಿಸಿರುವುದು ತಮ್ಮ ಸಾಹಿತ್ಯ ಸಾಧನೆಗೆ ದೊರೆತ ಮಹತ್ವದ ಗೌರವ ಎಂದು ಹೇಳಿದ ಎಂ.ಜಿ. ಹೆಗಡೆ, ಈ ಗೌರವವನ್ನು ಓದುಗರಿಗೂ, ಕನ್ನಡ ಸಾಹಿತ್ಯ ಪರಂಪರೆಗೂ ಸಮರ್ಪಿಸಿದರು.

😀
0
😍
0
😢
0
😡
0
👍
0
👎
0

Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading