Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು: ಉಡುಪಿಯಲ್ಲಿ BSI ಆಯೋಜನೆ

ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು: ಉಡುಪಿಯಲ್ಲಿ BSI ಆಯೋಜನೆ

ಉಡುಪಿ: ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ (BSI), ಉಡುಪಿ ಘಟಕದ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ–2026 ಪ್ರಯುಕ್ತ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಪರ್ಧೆಗಳು ಆಯೋಜಿಸಲಾಗಿದೆ.
ಸಂಸ್ಥೆಯ ಸ್ಥಾಪಕರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ಬುದ್ಧ ಧರ್ಮ, ಚಿಂತನೆ ಮತ್ತು ಸಾಂಸ್ಕೃತಿಕ ಅರಿವು ಬೆಳೆಸುವ ಉದ್ದೇಶ ಹೊಂದಿದೆ.

ಸ್ಪರ್ಧೆಗಳ ಸ್ಥಳ ಮತ್ತು ದಿನಾಂಕ
ಮೊದಲ ಹಂತದ ಸ್ಪರ್ಧೆಗಳು ಏಪ್ರಿಲ್ 19, 2026ರಂದು ಕುಂದಾಪುರದ ಡಾ. ಬಿ.ಆರ್. ಅಂಬೇಡ್ಕರ್ ಭವನ (ಭಂಡಾರ್ಕಾರ್ಸ್ ಕಾಲೇಜು ಹತ್ತಿರ) ನಡೆಯಲಿವೆ.
ಇನ್ನೊಂದು ಹಂತ ಏಪ್ರಿಲ್ 26, 2026ರಂದು ಆದಿ ಉಡುಪಿಯ ಡಾ. ಬಿ.ಆರ್. ಅಂಬೇಡ್ಕರ್ ಭವನ ನಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಒಂದು ಸ್ಥಳದಲ್ಲಿ ಭಾಗವಹಿಸಬಹುದು. ಇದು ಜಿಲ್ಲಾಮಟ್ಟದ ಸ್ಪರ್ಧೆಯಾಗಿರುತ್ತದೆ.

ಸ್ಪರ್ಧೆಗಳ ವಿಭಾಗಗಳು

ಇದನ್ನೂ ಓದಿ: ಉದ್ಯಾನವನದ ಜಾಗದ ಮೇಲೆ ಸರ್ಕಾರದ ಹೊಸ ಕಣ್ಣು? ಶೇ.5ರಷ್ಟು ಬಳಕೆಗೆ ಅನುಮತಿ

ಬುದ್ಧ ಚಿತ್ರ ಬಿಡಿಸುವ ಸ್ಪರ್ಧೆ

1ರಿಂದ 7ನೇ ತರಗತಿ
8ರಿಂದ 10ನೇ ತರಗತಿ

ಬುದ್ಧ ಗೀತೆ ಸ್ಪರ್ಧೆ

ಇದನ್ನೂ ಓದಿ: JCI ಬಂಟ್ವಾಳದಿಂದ ಶ್ರೀನಿವಾಸ್ ಅರ್ಬಿಗುಡ್ಡೆ ಅವರಿಗೆ ‘ಸಾಧನಶ್ರೀ’ ಪುರಸ್ಕಾರ

5ರಿಂದ 8ನೇ ತರಗತಿ
9ರಿಂದ 2ನೇ ಪಿಯುಸಿ

ಬುದ್ಧ ಕಥೆ ಸ್ಪರ್ಧೆ (ಗರಿಷ್ಠ 8 ನಿಮಿಷ)

5ರಿಂದ 8ನೇ ತರಗತಿ
9ರಿಂದ 2ನೇ ಪಿಯುಸಿ

ಇದನ್ನೂ ಓದಿ: ಕರ್ನಾಟಕದಲ್ಲಿ ಹಸಿರು ವಿದ್ಯುತ್ ಇಂಧನ ಮತ್ತು ಭೌಗೋಳಿಕ ರಾಜಕೀಯದ ಅಡ್ಡಿ

ನೋಂದಣಿ ಮತ್ತು ಬಹುಮಾನ
ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಪೂರ್ವ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗಾಗಿ 97432 88630, 99025 54869, 96063 44066, 94801 74993 ಸಂಖ್ಯೆಗಳನ್ನ ಸಂಪರ್ಕಿಸಬಹುದು.
ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಅರಿವು ಹೆಚ್ಚಿಸುವಲ್ಲಿ ಸಹಾಯಕವಾಗಲಿವೆ ಎಂದು BSI ಉಡುಪಿ ಘಟಕದವರು ತಿಳಿಸಿದ್ದಾರೆ.

##buddapoornina #udupi #buddist ❖
Web Add
Prajapara News Kannada

Discover more from Prajapara News

Subscribe now to keep reading and get access to the full archive.

Continue reading