ಇಂದು ಗುರುಪುರ ನದಿಯಲ್ಲಿ ಮೂಡುಬಿದಿರೆ ಗಾಂಧಿನಗರದ ನವ್ಯಾ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಪ್ರಾಥಮಿಕ ಮಾಹಿತಿಯಂತೆ, ನವ್ಯಾ ಸ್ಥಳೀಯ ಮೊಗರಿನೊಬ್ಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ ಆತನಿಂದ ಪ್ರೇಮಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಆಕೆ ಮಾನಸಿಕವಾಗಿ ನೋವಿಗೆ ಒಳಗಾಗಿದ್ದಳು ಎನ್ನಲಾಗಿದೆ. ತನ್ನ ಪ್ರೀತಿಯನ್ನು ಮರೆಯಲಾಗದೆ ಈ ತೀವ್ರ ನಿರ್ಧಾರಕ್ಕೆ ಮುಂದಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ಸಮಯದಲ್ಲಿ ನವ್ಯಾ ತನ್ನ ಸ್ನೇಹಿತೆಯೊಂದಿಗೆ ಗುರುಪುರ ನದಿಯ ಸೇತುವೆ ಬಳಿ ನಿಂತಿದ್ದಳು. ಕುಡಿಯಲು ನೀರಿನ ಬಾಟಲ್ ಕೇಳುವ ನೆಪದಲ್ಲಿ ಆಕೆ ಏಕಾಏಕಿ ನದಿಗೆ ಹಾರಿ ಬಿದ್ದಿದ್ದಾಳೆ. ಸ್ನೇಹಿತೆ ಆಕೆಯನ್ನು ಉಳಿಸಲು ಕೈ ಹಿಡಿದು ಪ್ರಯತ್ನಿಸಿದರೂ ಅದು ವಿಫಲವಾಗಿದ್ದು, ನವ್ಯಾ ನೀರಿನಲ್ಲಿ ಮುಳುಗಿಹೋದಳು ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆಯ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
😀
0
😍0
😢0
😡0
👍2
👎0