ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನ ಗಾಂಧಿ ವಾದಿಗಳು, ಲೋಹಿಯ ವಾದಿಗಳು, (ಕಮಿನೀಸ್ಟ್ )ಮಾರ್ಕ್ಸ್ ವಾದಿಗಳು ಬಾಬಾ ಸಾಹೇಬರನ್ನ 1985ರ ತನಕ ಅವರು ಕೇವಲ ದಲಿತ ನಾಯಕ, ದಲಿತ ಸೂರ್ಯ ಎಂದು ಕೇವಲ ಜಾತಿ ಒಳಗೆ ಕಟ್ಟಿ ಹಾಕಿ ಬಿಟ್ಟಿದ್ದರು. ಆ ಮನಸ್ಥಿಯ ಜನ ಈಗಲೂ ಇದ್ದಾರೆ.
ಲೇಖನ: ಪಿ ಕೆ ಮಂಜುನಾಥ 🤝ಜೈಭೀಮ್
1985ರ ನಂತರ ದಾದ ಸಾಹೇಬ್ ಕಾನ್ಷಿರಾಂ ಸಾಹೇಬರು ಅವರನ್ನ ಬಹುಜನರ ನಾಯಕ ವಿಶ್ವ ನಾಯಕನ್ನಾಗಿ ಮಾಡಿದರು ಅನ್ನೊದು ಅವರ ಭಾಷಣ ಅವರ ವಿಚಾರ ಸಂಕಿರಣದಿಂದ ನಮಗೆ ತಿಳಿಯುತ್ತದೆ. ಅಂಬೇಡ್ಕರ್ ರವರ ವಿಚಾರವನ್ನ obc(ಹಿಂದುಳಿದವರ್ಗ), ಅಲ್ಪಸಂಖ್ಯಾತ ವರ್ಗಕ್ಕೂ ಅರ್ಥ ಮಾಡಿಸಿದ್ದು ನಮ್ಮ ಸಾಹೇಬ್ ಕಾನ್ಷಿರಾಂ ಅನ್ನೊದರಲ್ಲಿ ಎರಡನೇ ಮಾತಿಲ್ಲ.
ಇವತ್ತು ವಿಶ್ವ ಕೊಂಡಾಡುತ್ತಾ ಇರೋದು ಬಾಬಾ ಸಾಹೇಬರ ವಿಚಾರವನ್ನ ಮತ್ತೆ ಮತ್ತೆ ಮುನ್ನೆಲೆಗೆ ತಂದು ಸಂವಿದಾನವನ್ನು ಪದೇ ಪದೇ ಮುಂದಿಟ್ಟು.. ಸಂವಿಧಾನವೇ ನಮ್ಮ ಪ್ರಣಾಳಿಕೆ ಎಂದು ಘಂಟಘೋಷವಾಗಿ ಹೇಳುತ್ತಿರುವುದು ಯಾರು ಅಲ್ಲ ಅದೇ ಕಾನ್ಸಿರಾಂ ರವರ ಅನುಯಾಯಿಗಳು ಅದು ಬಹುಜನ ಸಮಾಜ ಪಕ್ಷದವರು. ಕಾನ್ಷಿರಾಂ ಈ ಚಳುವಳಿ ಮುಂದುವರಿಸಿಲ್ಲ ಅಂದ್ರೆ ಬಾಬಾ ಸಾಹೇಬರು ಕೇವಲ ದಲಿತ ನಾಯಕರಾಗೆ ಇರಬೇಕಾಗಿತ್ತು ಅಂಬೇಡ್ಕರ್ ವಿಚಾರವನ್ನು ಮೂಲೆ ಗುಂಪು ಮಾಡ್ತಾ ಇದ್ರು ಅನ್ನೊದು ಕೂಡ ಕಟುಸತ್ಯ. ಯಾಕೆ ಅಂದ್ರೆ ಅಂಬೇಡ್ಕರ್ ನಿಬ್ಬಣಹೊಂದಿದ ನಂತರ ಬೇರೆ ಪಕ್ಷಗಳಿಗೆ ಮಾರಿಕೊಂಡ ಜನರು ತಮ್ಮ ತಮ್ಮ ಲಾಭಕ್ಕಾಗಿ ಇಡೀ ಸಮಾಜವನ್ನ ಬಲಿಕೊಟ್ಟು ಹೆಂಡ ತುಂಡಿಗಾಗಿ ಮಾರಾಟವಾಗುವ ಜನ ಎಂದು ಬಿಂಬಿಸಿ ಬಿಟ್ಟಾಗಿತ್ತು.
ಕಾನ್ಷಿರಾಂ ಬಂದ ನಂತರ ಚಮಚಾಗಳಿಗೆ ಕಡಿವಾಣ ಹಾಕಿ ಸ್ವಾಭಿಮಾನಿಗಳ್ಳನ್ನಾಗಿ.ಭಾರತದ ದೇಶದ ಬಹುಜನರ ದಿಕ್ಕನ್ನೇ ಬದಲಾಹಿಸಿ ಸ್ವತಂತ್ರ್ಯ ರಾಜ್ಯಧಿಕಾರ ಪಡೆಯುವ ಮಾರ್ಗದ ಕಡೆ ಸಾಗಿಸಿದರು ಆ ಮುಖಾಂತರ ಬಾಬಾ ಸಾಹೇಬರನ್ನ ಮತ್ತು ಸಂವಿದಾನವನ್ನ ವಿಶ್ವಕ್ಕೆ ಪರಿಚಯಿಸಿದ್ದರು ಈ ನಿಟ್ಟಿನಲ್ಲಿ ನಾವೆಲ್ಲರೂ ಸತ್ಯ ಅರಿಯೋಣ , ಮುನ್ನುಗೋಣ.. ನಮ್ಮ ಪೂರ್ವಜರು ಎಳೆದು ತಂದ ವಿಮೋಚನಾ ರಥವನ್ನ ಮುನ್ನಡೆಸೋಣ.
