Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ಹೊಸ ತಲೆಮಾರು ಮತ್ತು ನಮ್ಮ ದೇಶ – ಹರಿರಾಮ್‌ ರವರ ಲೇಖನ

ಹೊಸ ತಲೆಮಾರು ಮತ್ತು ನಮ್ಮ ದೇಶ – ಹರಿರಾಮ್‌ ರವರ ಲೇಖನ

ಯಾವುದೇ ವ್ಯವಸ್ಥೆ ಅಥವಾ ಸಮಾಜವೂ ನಿಂತ ನೀರಾಗಿ ಉಳಿಯಬಾರದು, ಅದು ಸದಾ ಚಲಿಸುವ ನೀರಿನಂತೆ ಪ್ರತಿ ಕ್ಷಣವೂ ಬದಲಾವಣೆಯ ಭಾಗವಾಗಿ ರೂಪಾಂತರಗೊಳ್ಳುತ್ತ ಸಾಗಬೇಕು. ಹಾಗೆ ಇದ್ದಾಗ ಮಾತ್ರ ಅದಕ್ಕೆ ಜೀವಂತಿಕೆ ಇದೆ ಎಂದು ಅರ್ಥ,ಇಲ್ಲದಿದ್ದರೆ ಆ ವ್ಯವಸ್ಥೆ ಅಥವಾ ಸಮಾಜ ಸತ್ತು ಹೋಗಿದೆ ಎಂದರ್ಥ, ನಮ್ಮ ದೇಶದಲ್ಲಿ ಸಮಾಜದ ಜೊತೆಗೆ ರಾಜಕೀಯ ವ್ಯವಸ್ಥೆಯು ಕೂಡ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ, ಈಗ ಸದ್ಯಕ್ಕೆ ನಮ್ಮ ದೇಶದಲ್ಲಿ ಅಂದರೆ 1935 ರ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಸ್ಥಾಪಿತಗೊಂಡು,ಆ ವ್ಯವಸ್ಥೆಯಿಂದ ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಂಡು ಅವರ ಮುಖಾಂತರ ನಮ್ಮ ಸರ್ಕಾರಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. 1952 ರಲ್ಲಿ ಸ್ವತಂತ್ರ ಭಾರತದ ಮೊಟ್ಟಮೊದಲ ಚುನಾವಣೆಯು ನಡೆಯಿತು, ಅಂದಿನಿಂದ ಇಂದಿನವರೆಗೂ ಈ ದೇಶದ ಪ್ರೆಜೆಗಳು ಬದಲಾವಣೆಯ ಕನಸುಗಳನ್ನು ಹೊತ್ತು ಕಾಯುತ್ತಾ, ಇಂದು ಅಥವಾ ನಾಳೆ ಖಂಡಿತವಾಗಿಯೂ ದೇಶವು ಬದಲಾಗುತ್ತೆ, ನಮ್ಮ ಪರಿಸ್ಥಿತಿಗಳು ಬದಲಾಗುತ್ತವೆ ಎಂಬ ಆಶಯವನ್ನು ಹೊತ್ತು ಕಾಯುತ್ತಲೆ ಇದ್ದಾರೆ, ಆದರೆ ವಾಸ್ತವದಲ್ಲಿ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನವಾಗಲಿ ಅಥವಾ ಯೋಚನೆಯಾಗಲಿ ಈ ದೇಶದಲ್ಲಿ ಇಂದಿಗೂ ಪ್ರಾರಂಭವಾಗಿಲ್ಲ.

ಸಮಾಜದಲ್ಲಿ ಅಥವಾ ವ್ಯವಸ್ತೆಯಲ್ಲಿ ಬದಲಾವಣೆಯು ಸಾಧ್ಯವಾಗುವುದು ಹೊಸ ಆಲೋಚನೆಗಳನ್ನು ಒಳಗೊಂಡಿರುವ ಹೊಸ ತಲಮಾರಿನ ಒಳಗೊಳ್ಳುವಿಕೆಯಿಂದ ಮಾತ್ರ. ಬಹಳ ಮುಖ್ಯವಾಗಿ ಒಂದು ವ್ಯವಸ್ಥೆ ಅಥವಾ ದೇಶ ಮುಂದುವರಿಯಲು ಹಾಗೂ ಬದಲಾವಣೆಯನ್ನು ಕಾಣಲು ಶಿಕ್ಷಣ ಹಾಗೂ ರಾಜಕೀಯವು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಶಿಕ್ಷಣದ ಕ್ಷೇತ್ರದಲ್ಲಿ ನಾವು ಒಂದಿಷ್ಟು ಸಾಧನೆಯನ್ನು ಮಾಡಿದ್ದೇವೆ, 1906 ರಲ್ಲಿ 6% ಇದ್ದ ಸಾಕ್ಷರತೆಯು ಇಂದು 74% ಗೆ ಬಂದು ನಿಂತಿದೆ ಆದರೆ ಇನ್ನೂ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಹಿಂದುಳಿದ ತಾಲೂಕು ಮತ್ತು ಜಿಲ್ಲೆಗಳಲ್ಲಿ ಸಾಕ್ಷರತೆಯನ್ನು ನಾವು ಎಣಿಸಿದಷ್ಟು ಸಾಧಿಸಲು ಸಾಧ್ಯವಾಗಿಲ್ಲ. ಉದಾಹರಣೆಗೆ, ಬೆಂಗಳೂರಿನಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ, SC ಗಳ ಸಾಕ್ಷರತೆಯು ಕೇವಲ 21%, ST ಗಳ ಸಾಕ್ಷರತೆಯು 17% ಹಾಗೆಯೇ ಸಾಮಾನ್ಯರ ಸಾಕ್ಷರತೆಯು 52% ಮಾತ್ರ ಎಂಬುದು ಆಘಾತಕರವಾದ ಸತ್ಯ. ಈ ಸ್ಥಿತಿಗೆ ಯಾರು ಹೊಣೆ ? ನಮ್ಮ ಸಮಾಜವೋ ? ಅಥವಾ ರಾಜಕೀಯ ವ್ಯವಸ್ಥೆಯೋ ? ಎಂಬುದನ್ನು ನಾವು ಯೋಚಿಸಬೇಕಿದೆ, ಏಕೆಂದರೆ, ನಮ್ಮ ದೇಶಕ್ಕೆ ಸ್ವತಂತ್ರ ದೊರಕಿದ ನಂತರ ನಮ್ಮದೇ ನಾಯಕತ್ವವು ನಮ್ಮನ್ನು ಅಭಿವೃದ್ಧಿಯ ಕಡೆಗೆ ಸಾಗಿಸಬೇಕಿತ್ತು, ನಾವು ಇಂದಿಗೆ ಎರಡನೇ ತಲಮಾರಿನ ರಾಜಕಾರಣಿಗಳನ್ನು ನೋಡುತ್ತಿದ್ದೇವೆ. ಒಂದಿಷ್ಟು ಮೂರನೇ ತಲಮಾರಿನ ರಾಜಕಾರಣಿಗಳನ್ನು ನೋಡುತ್ತಿದ್ದೇವೆ. ರಾಜಕೀಯಕ್ಕೆ ಹೊಸ ತಲಮಾರು ಬರಬೇಕು ಎಂದು ಎಲ್ಲರೂ ಮಾತನಾಡುತ್ತಾರೆ ಅಂತಯೇ ಒಂದಿಷ್ಟು ಹೊಸಬರಿಗೆ ಹೊಸತಲಮಾರಿನ ಕೋಟದಡಿ ರಾಜಕೀಯ ಅವಕಾಶವನ್ನು ಕಲ್ಪಿಸಿ ಅವರನ್ನು ಶಾಸಕರನ್ನಾಗಿ ಹಾಗೂ ಮಂತ್ರಿಗಳನ್ನಾಗಿಯೂ ಮಾಡಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಮಹತ್ತರವಾದ ಬದಲಾವಣೆ ಮಾತ್ರ ಕಾಣಲು ಸಾಧ್ಯವಾಗುತ್ತಿಲ್ಲ ಯಾಕೆ? ಯಾಕೆಂದರೆ, ಬಹುಶಃ ನಾವು ಹೊಸ ತಲಮಾರು ಎಂಬ ಪದದ ಅರ್ಥವನ್ನೇ ಅಪಾರ್ಥ ಮಾಡಿಕೊಂಡಿದ್ದೇವೆ ಎಂದನಿಸುತ್ತದೆ, ಏಕೆಂದರೆ ಹೊಸ ತಲೆಮಾರು ಎಂದರೆ ಯಾರು ? ಹೊಸ ತಲೆಮಾರು ಎಂದರೆ ಅದು ಕೇವಲ ಒಂದು ಕಾಲಘಟ್ಟದಲ್ಲಿ ಹುಟ್ಟಿರುವ ಪೀಳಿಗೆ ಮಾತ್ರ ಅಲ್ಲ, ಹೊಸ ಆಲೋಚನೆಗಳನ್ನು ಹಾಗೂ ಕನಸುಗಳನ್ನು ಕಟ್ಟಿಕೊಂಡು ಸಮಾಜದಲ್ಲಿ ವ್ಯವಸ್ಥಿತವಾಗಿ ಬದಲಾವಣೆಯನ್ನು ಕಾಣುವ ಆಶಯಗಳನ್ನು ಹೊತ್ತುಕೊಂಡು ಕಾದು ಕೂತಿರುವ ತಳೆಮಾರು ಎಂದರ್ಥ. ದುರಂತವೆಂದರೆ ಇಂತಹ ನಿಜವಾದ ಹೊಸ ತಲೆಮಾರಿಗೆ ನಮ್ಮ ವ್ಯವಸ್ಥೆಯಲ್ಲಿ ಯಾವುದೇ ಅವಕಾಶಗಳು ಸಿಗದೇ ಇರುವುದು ಮಾತ್ರ ವಾಸ್ತವ. ಹೊಸ ತಲೆಮಾರು ಎಂದರೆ ಯಾವುದೋ ಒಂದು ಸ್ಥಾಪಿತ ಕುಟುಂಬ ಅಥವಾ ವ್ಯಕ್ತಿಯ ಮಗ,ಮಗಳು, ಅಳಿಯ,ಮೊಮ್ಮಗ ಅಥವಾ ತಮ್ಮದೇ ಕುಟುಂಬದ ಯಾವುದೋ ಒಂದು ಕುಡಿಯನ್ನು ಮುಂದೆ ನಿಲ್ಲಿಸಿ ತಗೋ ಹೊಸ ತಲಮಾರುಗಳನ್ನು ಸಮಾಜಕ್ಕೆ ಅರ್ಪಿಸುತ್ತಿದ್ದೇವೆ ಎಂದು ಅವರಿಗೆ ಅವಕಾಶಗಳನ್ನು ಮಾಡಿಕೊಟ್ಟು ಅವರಿಂದ ಹೊಸದನ್ನು ಅಥವಾ ಬದಲಾವಣೆಯನ್ನು ನಿರೀಕ್ಷಿಸಿ ಕುರುವುದಲ್ಲ.
ಉದಾ: ರಾಮಲಿಂಗ ರೆಡ್ಡಿಯ ಮಗಳು ಹೇಗೆ ಹೊಸ ಆಲೋಚನೆಗಳನ್ನು ರೂಪಿಸಿಕೊಳ್ಳಲು, ಬದಲಾವಣೆಯ ಆಲೋಚನೆಗಳನ್ನು ಒಯ್ಯಲು ಸಾಧ್ಯ ? ತನ್ನ ತಂದೆಯನ್ನೇ ನೋಡಿಕೊಂಡು ಬೆಳೆದು, ಸಮಾಜದಲ್ಲಿ ಯಾವುದೇ ರೀತಿಯ ಒಳಗೊಳ್ಳುವಿಕೆ ಇರದೆ, ಹೊಸ ತಲೆಮಾರಿನ ಆಶಯಗಳ ಅರಿವಿಲ್ಲದಿರುವ ಆಕೆ ಹೊಸ ನಾಯಕತ್ವವನ್ನು ಕೊಡಲು ಹೇಗೆ ಸಾಧ್ಯ ? ಹಾಗೆಯೇ, ಮಲ್ಲಿಕಾರ್ಜುನ ಖರ್ಗೆಯವರ ಮಗ ಪ್ರಿಯಾಂಕ ಖರ್ಗೆ, ಕೆ.ಎಚ್. ಮುನಿಯಪ್ಪರವರ ಮಗಳಾದ ರೂಪಕಲಾ ಶಶಿಧರ್, ಸತೀಶ್ ಜಾರಕಿಯೋಳಿಯ ಮಗ, ಯಡಿಯೂರಪ್ಪನವರ ಮಕ್ಕಳು, ಕುಮಾರಸ್ವಾಮಿ ಅವರ ಮಗ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಇಂತವರಿಂದ ನಾವು ಹೇಗೆ ಹೊಸ ಆಲೋಚನೆಗಳನ್ನು ಹಾಗೂ ಬದಲಾವಣೆಯನ್ನು ಬಯಸಲು ಸಾಧ್ಯ? ನಿಜವಾದ ಹೊಸ ತಲೆಮಾರು ಹಳೆಯ ಮತ್ತು ಹೊಸ ಸಮಸ್ಯೆಗಳ ಜಂಜಾಟದಲ್ಲಿ ಸಿಕ್ಕಿಹಾಕಿಕೊಂಡು, ಆ ಸಮಸ್ಯೆಗಳಿಂದ ಹೊರಬರಲಾಗದೆ ವ್ಯವಸ್ಥೆಗೆ ಶಾಪ ಹಾಕುತ್ತಾ, ಆ ಸಮಸ್ಯೆಗಳಿಗೆ ತಮ್ಮದೇ ಆದ ಪರಿಹಾರಗಳನ್ನು ಕೂಡ ರೂಪಿಸಿಕೊಂಡು ಈ ವ್ಯವಸ್ಥೆ ಮತ್ತು ಸಮಾಜವನ್ನು ಬದಲಾಯಿಸಲು ಅನೇಕ ಕನಸುಗಳನ್ನು ಹೊತ್ತುಕೊಂಡು ಕಾದು ಕೂತಿದ್ದಾರೆ,ಆದರೆ ಅವರಿಗೆ ಯಾವುದೇ ರಾಜಕೀಯ ಬೆಂಬಲವಾಗಲಿ, ರಾಜಕಾರಣಿಗಳ ಬೆಂಬಲವಾಗಲಿ ಅಥವಾ ವ್ಯವಸ್ಥೆಯ ಬೆಂಬಲವಾಗಲಿ ಇಲ್ಲದೆ, ಕನಸಿದ್ದರು ಅದನ್ನು ಸಕಾರ ಗೊಳಿಸಿಕೊಳ್ಳುವ ಶಕ್ತಿ ಇಲ್ಲದೆ ಕಾದು ಕೂತಿದ್ದಾರೆ, ಬಹುಷಃ ಇಂತಹ ತಲೆಮಾರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದೆ ಆದರೆ ಖಂಡಿತವಾಗಿಯೂ ದೇಶವು ಬದಲಾಗುತ್ತದೆ, ಸಮಸ್ಯೆಗಳು ಮಾಯವಾಗುತ್ತವೆ ಮತ್ತೆ ಹೊಸ ಸಮಸ್ಯೆಗಳಿಗೆ ಹೊಸ ತಲೆಮಾರು ಉತ್ತರಗಳನ್ನು ಕಂಡುಕೊಳ್ಳುತ್ತದೆ.

ಇದನ್ನೂ ಓದಿ: ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ

ನಿಜವಾದ ಹೊಸ ತಲೆಮಾರಿಗೆ ಸೇರಿದ ಪೀಳಿಗೆಯು ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಅನೇಕ ರಾಜಕೀಯ ಪಕ್ಷಗಳಲ್ಲಿ ಸೇರಿಕೊಂಡು ಇಂದಲ್ಲ ನಾಳೆ ನಮಗೆ ಅವಕಾಶ ಸಿಗಬಹುದು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಹತ್ತರವಾದ ಬದಲಾವಣೆಯನ್ನು ತರಬಹುದು ಎಂಬ ಕನಸುಗಳನ್ನು ಹೊತ್ತು ಇಂದಿಗೂ ಪಕ್ಷಗಳ ಕೈ ಆಳುಗಳಾಗಿ, ಪಕ್ಷಗಳ, ಪ್ರಚಾರಕರಾಗಿ, ಸದಾ ಪಕ್ಷದ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ ಯೋಚಿಸುತ್ತಾ ದುಡಿಯುತ್ತಾ, ತಮ್ಮ ಕನಸುಗಳನ್ನು ಸಕಾರ ಗೊಳಿಸಿಕೊಳ್ಳಬೇಕು ಎಂಬ ಆಶಯದೊಂದಿಗೆ ತಮ್ಮ ಬುದ್ಧಿ ಮತ್ತು ಆಯುಷ್ಯನ್ನು ಕಳೆಯುತ್ತಾ ತಮ್ಮ ನಾಯಕರುಗಳ ಅಟ್ಟಹಾಸ ಬೈಗುಳ ತಿರಸ್ಕಾರ ಹಾಗೂ ಅಹಂಕಾರಗಳನ್ನು ಸಹಿಸಿಕೊಂಡು ಕಾದು ಕೂತಿದ್ದಾರೆ, ಇಂತಹ ತಲೆಮಾರಿಗೆ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ಅವಕಾಶಗಳನ್ನು ನೀಡದಿದ್ದರೆ, ಈ ತಲಮಾರು ತಮ್ಮ ಕನಸುಗಳನ್ನು ಮಾತ್ರ ಕಳೆದುಕೊಳ್ಳಬಹುದು ಆದರೆ ನಮ್ಮ ದೇಶವು ಮಾತ್ರ ತನ್ನ ಭವಿಷ್ಯವನ್ನು ಕಳೆದುಕೊಳ್ಳುತ್ತದೆ.

ಕೇವಲ ಪಕ್ಷ ಮತ್ತು ಸಿದ್ಧಾಂತಗಳಿಂದ ಮಾತ್ರ ಯಾವುದೇ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ, ಆ ಪಕ್ಷ ಮತ್ತು ಸಿದ್ಧಾಂತಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪಕ್ಷ ಮತ್ತು ಸಿದ್ಧಾಂತಗಳನ್ನು ಬೆಳೆಸಿ ಉಳಿಸುವ ಜೊತೆಗೆ ದೇಶವನ್ನು ಕಟ್ಟುವ, ದೇಶವನ್ನು ಪರಿವರ್ತಿಸುವ ಸಾಮರ್ಥ್ಯ ಇರುವು ಹೊಸ ತಲೆಮಾರಿನ ಯುವ ಪೀಳಿಗೆಯ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವದಿಂದ ಮಾತ್ರ. ಈ ಸತ್ಯವನ್ನು ನಾವು ಎಷ್ಟು ಬೇಗ ಅರಿಯುತ್ತೇವೆಯೋ ಅಷ್ಟು ಬೇಗ ದೇಶವು ಪ್ರಗತಿಯತ್ತ ಸಾಗುತ್ತದೆ, ಜೊತೆಗೆ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುತ್ತದೆ. ಇಲ್ಲದಿದ್ದರೆ ಈ ಕನಸುಗಳನ್ನು ಹೊತ್ತಿರುವ ಹೊಸ ತಲೆಮಾರು ಹಾಗೂ ದೇಶ ಎರಡು ಕೊರಗುತ್ತಾ ಕೂರಬೇಕಾಗುತ್ತದೆ.

ಇದನ್ನೂ ಓದಿ: ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
  • ಹರಿರಾಮ್.ಎ
    ವಕೀಲರು
😀
2
😍
2
😢
0
😡
0
👍
1
👎
1

Web Add
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ಡಿಕೆಸಿಎ ಮಹಿಳಾ ಕ್ರಿಕೆಟ್ ಟೂರ್ನಿ: SACA ಮಂಗಳೂರು ಚಾಂಪಿಯನ್
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಮಂಗಳೂರು: ಅಮೇರಿಕನ್ ಯುದ್ಧಕೋರ ನೀತಿ ಖಂಡಿಸಿ ಪ್ರತಿಭಟನೆ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಶೈಕ್ಷಣಿಕ ಅಭಿಯಾನದ ಯಶಸ್ವಿ ಮುಕ್ತಾಯ 6,493 ಕಿ.ಮೀ ಸುದೀರ್ಘ ಪ್ರಯಾಣ – ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಮಂಗಳೂರು: ಮಂಜಲ್ಪಾದೆ ಪ್ರದೇಶದಲ್ಲಿ ‘ಭೂತ’ ದಾಳಿ ಎನ್ನಲಾದ ವೈರಲ್ ಫೋಟೋ-ವೀಡಿಯೋಗಳ ಸತ್ಯವೇನು?
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪು
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಮಂಗಳೂರು: ಹೈಡ್ರೋಜನ್ ಉತ್ಪಾದನಾ ತಂತ್ರಜ್ಞಾನಕ್ಕೆ ಚಾಲನೆ — ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರ
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಪ್ರಸಾದ ಎಸಳು’ ಸಂಪ್ರದಾಯದ ಕುರಿತು ಚರ್ಚಾ ಗೋಷ್ಠಿ
Prajapara News Kannada